ವಿಜಯನಗರ: ಶೌರ್ಯ, ಸಾಹಸಕ್ಕೆ ಹೆಸರಾಗಿದ್ದ ವೀರವನಿತೆ ಓನಕೆ ಓಬವ್ವ ತವರೂರಲ್ಲಿ ಫೆ.24 ರಂದು ಆರಂಭಗೊಂಡ ಗುಡೇಕೋಟೆ ಉತ್ಸವದ ಎರಡನೇ ದಿನದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದು ಫೆ.25 ರಂದು ತೆರೆ ಎಳೆಯಲಾಯಿತು.
ಒನಕೆ ಓಬವ್ವ ವೇದಿಕೆಯಲ್ಲಿ ಇಳಿ ಹೊತ್ತಿನಲ್ಲಿ ಗುಡೇಕೋಟೆ ಉತ್ಸವದ ಸಮಾರೋಪ ಸಮಾರಂಭ ನಡೆಯಿತು. ಶಾಸಕ ಡಾ.ಶ್ರೀನಿವಾಸ ಎನ್.ಟಿ. ಹಾಗೂ ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Bigg Impact: ನಮ್ಮ ಮೆಟ್ರೋದಲ್ಲಿ ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ: ವರದಿ ಬಳಿಕ BMRCL ಸಿಬ್ಬಂದಿ ವಜಾ!
ಇದೆ ವೇಳೆ ಶಾಸಕ ಶ್ರೀನಿವಾಸ್ ಮಾತನಾಡಿ, ಉತ್ಸವವು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಉತ್ಸವಕ್ಕೆ ಶ್ರಮಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಭಿನಂದನೆ ತಿಳಿಸುವೆ ಎಂದರು. ಒನಕೆ ಓಬವ್ವ ವಂಶಸ್ಥರ ಹಾಗೂ ಗುಡೇಕೋಟೆಯ ಪಾಳೆಗಾರರ ಸಲಹೆಗೆ ಸ್ಪಂದಿಸಿ ಜೊತೆಗಿರುವುದಾಗಿ ತಿಳಿಸಿದರು.