ಭೀಕರವಾದ ಬರಗಾಲದ ಛಾಯೆಯ ನಡುವೆಯು ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಬೆಳೆದ ಈರುಳ್ಳಿಯು ರೈತರ ಕಣ್ಣೀರು ಒರೆಸುವ ಬದಲಾಗಿ ರೈತರಿಗೆ ಕಣ್ಣೀರು ಬರಿಸಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ರೈತ ಮಾನಪ್ಪ ಕಮ್ಮಾರ ಎಂಬುವರು ತಮ್ಮ ಒಂದು ಎಕರೆ ನೀರಾವರಿ ಜಮೀನಿನಲ್ಲಿ ಬೆಳೆದ 53-ಪಿಸಿ ಬಿಳಿ ಈರುಳ್ಳಿಯನ್ನು ಬೆಳಗಾಂವಿಯ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದಾರೆ.
53-ಪಿಸಿ ಈರುಳ್ಳಿಗೆ ಮೂರು ಹಂತದಲ್ಲಿ ತಲಾ 500 ರೂ, 700 ರೂ ಹಾಗೂ 1000 ರೂ. ದರ ಸಿಕ್ಕಿದ್ದು ಒಟ್ಟು ಪಟ್ಟಿಯ 22500 ರೂ.ಹಣದಲ್ಲಿ ಈರುಳ್ಳಿ ಸಾಗಾಟದ ವಾಹನದ ಬಾಡಿಗೆ ಮೊತ್ತ 5000 ರೂ.ಹಣ ಕಡಿತಗೊಂಡು ರೈತನಿಗೆ ಉಳಿದ 17500 ರೂ.ಹಣ ಕೈಗೆ ಸೇರಿದೆ.
ರೈತನು ಒಂದು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯಲು 40 ರಿಂದ 50 ಸಾವೀರ ರೂ.ಹಣ ಖರ್ಚು ಮಾಡಿದ್ದು ಈರುಳ್ಳಿಯ ಬೆಲೆ ಕುಸಿತದಿಂದಾಗಿ ರೈತನಿಗೆ ದಿಕ್ಕು ತೋಚದಂತಾಗಿದ್ದು ಸರ್ಕಾರ ರೈತರ ನೆರವಿಗೆ ದಾವಿಸುವ ಮೂಲಕ ಈರುಳ್ಳಿಗೆ ಸೂಕ್ತ ಧರವನ್ನು ನಿಗದಿಪಡಿಸಬೇಕೆಂದು ರೈತ ಮಾನಪ್ಪ ಕಮ್ಮಾರ ಒತ್ತಾಯಿಸಿದ್ದಾರೆ.