ಕಲಬುರಗಿ: ಶ್ರೀರಾಮನಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸುವ ಟೈಮಲ್ಲೇ ನಮಗೂ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಅಂತ VHP ಉತ್ತರ ಪ್ರಾಂತ್ಯದ ಕಾರ್ಯದರ್ಶಿ ಕಲಬುರಗಿ ಮೂಲದ ಲಿಂಗರಾಜಪ್ಪ ಅಪ್ಪ ಹೇಳಿದ್ದಾರೆ.
ವಿಶೇಷ ಆಹ್ವಾನಿತರಾಗಿ ದಂಪತಿ ಸಮೇತ ಅಯೋಧ್ಯೆಗೆ ತೆರಳಿರುವ ಅಪ್ಪಾ ನಾಳೆ ಊರಿಗೆ ವಾಪಾಸ್ ಬರಲಿದ್ದಾರೆ..ಕಲ್ಯಾಣ ಕರ್ನಾಟಕದಿಂದ ತೆರಳಿರುವ ಏಕೈಕ ದಂಪತಿ ಜೋಡಿ ನಿನ್ನೆ ಪ್ರಾಣ ಪ್ರತಿಷ್ಠಾಪನೆ ವೇಳೆ ಗರ್ಭಗುಡಿ ಮುಂಭಾಗದ ಪ್ರಾಂಗಣ ಹತ್ತಿರದಲ್ಲೇ ಕುಳಿತಿದ್ದುದು ವಿಶೇಷವಾಗಿತ್ತು.