ಬಾಗಲಕೋಟೆ ::ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಿತು.
ಜೀವ ಬೆದರಿಕೆ: 113 ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ..!
ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಜಾರಿದ್ದು ನನಗೆ ಬೇಸರ ತಂದಿದೆ.
ಸುಮಾರು 3 ಗಂಟೆಯಿಂದ ತಮ್ಮ ಸಮಸ್ಯೆಯನ್ನು ಹೊತ್ತು ತಂದಿರುವ ಸಾರ್ವಜನಿಕರ ಕೆಲಸ ಮಾಡದೇ ಇದ್ದರೆ ನಾವು ಅಧಿಕಾರಿಗಳಾಗಿ ಉಪಯೋಗವೇನು.
30 ದಿನದಲ್ಲಿ ಈ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಒಂದು ವೇಳೆ ಅಧಿಕಾರಿಗಳು ಬಗೆಹರಿಸಿದೆ ಇದ್ದರೆ ನಿಮ್ಮ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕೆ ಜಾನಕಿ ಖಡಕ ಎಚ್ಚರಿಕೆ ನೀಡಿದರು.
ರಬಕವಿ ಮುಖ್ಯರಸ್ತೆ ಅಗಲೀಕರಣ ಮತ್ತು ರಬಕವಿ ನಾಕಾದಿಂದ ರಾಘವೇಂದ್ರ ಗುಡಿ ಹೊಸೂರ ರಸ್ತೆವರಿಗೂ ಕೂಡಲೇ ಅತಿಕ್ರಮಣ ತರುಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಮಾಡಬೇಕು ಮತ್ತು ರಬಕವಿ ಮಹೇಶವಾಡಗಿ ಬ್ರಿಜ್ ಕಾಮಗಾರಿ ತುರಿತಗತಿಯಲ್ಲಿ ಮುಗಿಸಿ ಎಂದು ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಸಂತೋಷ್ ಕಾಮಗೊಂಡವರಿಗೆ ಹೇಳಿದರು.
ಒಟ್ಟು 106 ಅರ್ಜಿಗಳು ಬಂದಿದೆ ಅದರಲ್ಲಿ ನೇಕಾರರ ವಿದ್ಯುತ್ ಬಿಲ್ ಕುರಿತು ಮತ್ತು ತಡೆಗೋಡೆ ಕುರಿತು ರಾಜ್ಯಮಟ್ಟದಲ್ಲಿರುವುದರಿಂದ ಅದನ್ನ ರಾಜ್ಯಮಟ್ಟಕ್ಕೆ ಗಮನಕ್ಕೆ ತರುತ್ತೇವೆ ಎಂದರು.
ಇನ್ನುಳಿದ 104 ಅರ್ಜಿಗಳು ತಾಲೂಕ ಮಟ್ಟದ ಅಧಿಕಾರಿಗಳು 30 ದಿನದಲ್ಲಿ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಾವು ಸಾರ್ವಜನಿಕರ ಕೆಲಸ ಮಾಡಲಿಕ್ಕೆ ಅಧಿಕಾರದಲ್ಲಿ ಇದ್ದೇವೆ ಮತ್ತು ಸಾರ್ವಜನಿಕ ಕೆಲಸ ಮಾಡಲೇಬೇಕು.
ಅಧಿಕಾರಿಗಳು ಇಲ್ಲಿ ಬಂದಂತ ಸಮಸ್ಯೆಗಳನ್ನ ಸೀರಿಯಸ್ ಆಗಿ ತೆಗೆದುಕೊಂಡು ಪ್ರಾಮಾಣಿಕತೆಯಿಂದ ಬಗೆಹರಿಸಬೇಕೆಂದರು.
ಪ್ರಕಾಶ ಕುಂಬಾರ
ಬಾಗಲಕೋಟೆ