ಬೆಂಗಳೂರು: ರಾಜ್ಯವನ್ನೇ ಬೆಚ್ಚುಗೊಳಿಸಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ತನಿಖೆ ಚುರುಕುಗೊಂಡಿದೆ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ದಾಖಲಾಗಿರುವ ಕೇಸನ್ನು ಎಸ್ಐಟಿ ವರ್ಗಾಯಿಸಿಕೊಂಡಿದೆ.. ಆದರೆ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಅನ್ನೋದೇ ನಿಗೂಢವಾಗಿದೆ.. ಮೂಲ ಗಳು ಪ್ರಕಾರ ವಿದೇಶ ದಲ್ಲಿ ಇದ್ದಾರೆ. ಅನ್ನೋ ಅನುಮಾನ ಇದೆ ಹಾಗಾದರೆ ಎಸ್ಐಟಿ ಅಧಿಕಾರಿಗಳು ತನಿಖೆಗೆ ಯಾವ ಸಿದ್ದತೆ ಮಾಡಿಕೊಂಡಿದ್ದಾರೆ ಅನ್ನೋದರ ಕಂಪ್ಲೀಟ್ ಡಿಟ್ಲೇಲ್ಸ್ ಇಲ್ಲಿದೆ ನೋಡಿ
ರಾಜ್ಯ ರಾಜಕಾರಣ ಮಾತ್ರವಲ್ಲ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಂಚಲನ ಸೃಷ್ಟಿಸಿರುವ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಈಗ ಎಸ್ ಐ ಟಿ ಹೇಗಲೇರಿದೆ.. ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ರಚನೆಯಾಗಿರೋ ಎಸ್ಐಟಿ ತಂಡ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಕೆಯನ್ನು ಶುರು ಮಾಡಿದೆ. ಈ ಸಂಬಂಧ ಇಂದು ರೇವಣ್ಣ ಅಂಡ್ ಸನ್ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ SITಗೆ ವರ್ಗಾವಣೆ ಆಗಿದೆ..
ಯೆಸ್. ಹೊಳೆನರಸೀಪುರ ಟೌನ್ ಪೋಲಿಸ್ ಅಧಿಕಾರಿಗಳು ನೇರವಾಗಿ ಬೆಂಗಳೂರಿನ ಎಸ್ಐಟಿ ಕಚೇರಿಗೆ ಬಂದು ಕೇಸ್ ಸಂಬಂಧ ಕಡತಗಳನ್ನು ವರ್ಗಾಯಿಸಿದ್ದಾರೆ.. ಹಾಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ ಕೂಡ ಎಸ್ಐಟಿ ಮುಖ್ಯಸ್ಥರದ ಬಿ ಕೆ ಸಿಂಗ್ ರನ್ನ ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವೈರಲ್ ಆದ ವಿಡಿಯೋಗಳಲ್ಲಿದ್ದ ಕೆಲವು ಸಂತ್ರಸ್ತೆಯರ ಗುರುತು ಪತ್ತೆಯಾದ ಹಿನ್ನೆಲೆ ಅವರನ್ನ ಎಸ್ ಐಟಿ ಕಚೇರಿಗೆ ಕರೆಸಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದು ಕೊಳ್ಳಲು ಮುಂದಾಗಿದ್ದಾರೆ.. ಹಾಗೆ ವೈರಲ್ ಆಗಿರೋ ವಿಡಿಯೋಗಳ ಸತ್ಯಾಸತ್ಯೆಯನ್ನು ಪರಿಶೀಲನೆಗೆ ಒಳಪಡಿಸಲು ಸಿದ್ದತೆ ನಡೆದಿದೆ.
Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!
ಇನ್ನು ಪ್ರಜ್ವಲ್ ರೇವಣ್ಣ ಏಪ್ರಿಲ್ 28 ಮುಂಜಾನೆ 3 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್ ಫರ್ಟ್ಗೆ ಹಾರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಿದ್ದೇವೆ. ನಾವು ಒಂದು ಬಾರಿ ಎಸ್ಐಟಿಗೆ ವಹಿಸಿದ್ದೇವೆ, ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ, ಅದು ಅವರಿಗೆ ಬಿಟ್ಟಿದ್ದು. ನಾವು ಅದಕ್ಕೆ ಅಡ್ಡಿಪಡಿಸುವ ಕೆಲಸವನ್ನು ಮಾಡುವುದಿಲ್ಲ, ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ..
ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಪದ್ಮಾವತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಟ ಅಮರನಾಥ್ ಸೇರಿದಂತೆ ಹಲವರ ವಿರುದ್ಧ ಜೆಡಿಎಸ್ ಮಾಜಿ ಎಂಎಲ್ ಸಿ ಶ್ರೀಕಂಠೆ ಗೌಡ ರಿಂದ ಪೊಲೀಸ್ ಕಮೀಷನರ್ ಗೆ ದೂರು ನೀಡಿದಾರೆ ಹೆಚ್ ಡಿಡಿ, ಹೆಚ್ಡಿಕೆ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಭಾವಚಿತ್ರಕ್ಕೆ ಪೊರಕೆ ಹಾಗೂ ಚಪ್ಪಲಿ ತೋರಿಸಿ ಅವಮಾನ ಮಾಡಿದಾರೆ ಅದು ತಪ್ಪು ಎಸ್ ಐ ಟಿ ರಚನೆಯಾಗಿದೆ ನಮ್ಮ ನಾಯಕರು ಅದನ್ನ ಸ್ವಾಗತ ಮಾಡಿದ್ದಾರೆ ತನಿಖೆಯಾಗಲಿ ಸತ್ಯಸತ್ಯತೆ ಹೊರಬರಲಿ ಅನಂತರ ಏನು ಅನ್ನೋದು ಗೊತ್ತಾಗುತ್ತೆ ಶ್ರೀಕಂಠೆ ಗೌಡ ಹೇಳಿದಾರೆ.
ಸದ್ಯ ರಾಜ್ಯ ಸರ್ಕಾರ ಎಸ್ ಐ ಟಿ ತಂಡಕ್ಕೆ ಒಬ್ಬ ಮುಖ್ಯಸ್ಥರು ಇಬ್ಬರು ಸದಸ್ಯರನ್ನು ಮಾತ್ರ ನೇಮಕ ಮಾಡಿದ್ದು ತನಿಖೆ ಭಾಗವಾಗಿ ಇನ್ನು ಅನೇಕ ಅಧಿಕಾರಿಗಳು ಎಸ್ಐಟಿ ತಂಡ ಸೇರಬೇಕಿದೆ. ಒಮ್ಮೆ ಕಂಪ್ಲೀಟ್ ಟೀಮ್ ರಚನೆಯಾದರೆ ತನಿಖೆಗೆ ಇನ್ನಷ್ಟು ವೇಗ ಸಿಗಲಿದೆ. ಆದರೆ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ? ಪ್ರಕರಣದ ವಿಚಾರಣೆಗೆ ಹಾಜರಾಗುತ್ತಾರಾ..? ಅಥವಾ ಪೊಲೀಸರೇ ಪ್ರಜ್ವಲ್ ರೇವಣ್ಣನ ಹಿಡಿದು ತರುತ್ತಾರೆ ಅನ್ನೋದು ಕುತೂಹಲವಾಗಿದೆ..