ಹಾಸನ:- ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರ ಸ್ಥಳ ಮಹಜರು ಅಂತ್ಯವಾಗಿದೆ.
ಗೋಲ್ಡ್ ಪ್ರಿಯರಿಗೆ ಕೊಂಚ ನೆಮ್ಮದಿ ಸುದ್ದಿ…ಚಿನ್ನ, ಬೆಳ್ಳಿ ಬೆಲೆ ತುಸು ಇಳಿಮುಖ; ಇಲ್ಲಿದೆ ಇವತ್ತಿನ ದರಪಟ್ಟಿ!
ನಿನ್ನೆ ಹಾಸನದ ಹೊಳೆನರಸೀಪುರದಲ್ಲಿರೋ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮುಗಿಸಿದೆ. ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳು ಚೆನ್ನಾಂಬಿಕಾ ನಿವಾಸಕ್ಕೆ ಎಂಟ್ರಿಕೊಟ್ಟಿದ್ದರು. ಆರೋಪಿ ಪ್ರಜ್ವಲ್ ರೇವಣ್ಣನ ಕರೆತಂದು ಸತತ 4 ಗಂಟೆಗಳ ಕಾಲ ಚೆನ್ನಾಂಬಿಕಾ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಎಫ್ಎಸ್ಎಲ್ ತಂಡ ತಾಂತ್ರಿಕ ಸಾಕ್ಷಿಗಳನ್ನ ಕಲೆ ಹಾಕಿತು.
ಪೆನ್ಡ್ರೈವ್ ಹೊರ ಬಿದ್ದ 43 ದಿನಗಳ ಬಳಿಕ ಪ್ರಜ್ವಲ್ ರೇವಣ್ಣಗೆ ಹೊಳೆನರಸೀಪುರದ ದರ್ಶನವಾಯಿತು. ಆದರೆ ಪೊಲೀಸ್ ವ್ಯಾನ್ನಲ್ಲಿದ್ದ ಪ್ರಜ್ವಲ್, ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬೀಳದಂತೆ ಸೀಟ್ ಮೇಲೆ ಅಡಗಿ ಮಲಗಿದ್ದ. ಇತ್ತ ಚೆನ್ನಾಂಬಿಕಾ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಹಜರು ಮುಗಿಸಿ ವಾಪಸ್ ಹೊರಡುವಾಗ ಪ್ರಜ್ವಲ್ ಬೆಂಬಲಿಗರು ಜೈಕಾರ ಕೂಗಿದ್ದರು. ಸದ್ಯ ಎಸ್ಐಟಿ ತನಿಖಾ ತಂಡ ಚೆನ್ನಾಂಬಿಕಾ ನಿವಾಸದಲ್ಲಿ ಮಾತ್ರ ಸ್ಥಳ ಮಹಜರು ಪೂರ್ಣಗೊಳಿಸಿದೆ