ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆ ಕಾವು ರಂಗೇರಿದೆ.ಬಳ್ಳಾರಿ ಬಿಸಿಲಿನ ರಭಸಕ್ಕಿಂತ ಚುನಾವಣೆ ಪ್ರಚಾರದ ಕಾವು ತುಂಬಾ ಹೆಚ್ಚಿದೆ. ಕಾಂಗ್ರೇಸ್ ಪಕ್ಷದಿಂದ ಹಾಲಿ ಸಂಡೂರು ಶಾಸಕರಾದ ಈ ತುಕಾರಾಂ ಅವರು ಕಣದಲ್ಲಿ ಇದ್ದರೆ. ಈತ್ತ ಬಿಜೆಪಿಯಿಂದ ಮಾಜಿ ಸಚಿವರಾದ ಶ್ರೀರಾಮುಲು ಕಣದಲ್ಲಿ ಇದ್ದಾರೆ. ನಾಳೆ ಮುಂಜಾನೆ ಎರಡು ಪಕ್ಷದ ಅಭ್ಯಾರ್ಥಿಗಳು ಒಂದೇ ದಿನ ನಾಮೀನೆಷನ್ ಮಾಡುತ್ತಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.ಈ ಕುರಿತು ಒಂದು ವರದಿ ನೋಡೋಣ ಬನ್ನಿ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. ಮೇ ೦7ನೇ ತಾರೀಖಿಗೆ ಎರಡನೇ ಹಂತದಲ್ಲಿ ಬಳ್ಳಾರಿ ಚುನಾವಣೆ ನಡೆಯಲಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ನಡುವೆ ನೇರ ಹಣಾಹಣಿ ಇದೆ. ಈ ಬಾರಿ ಚುನಾವಣೆಯಲ್ಲಿ ಅವಳಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ವಿವಿಧ ತಂತ್ರಗಾರಿಕೆಯನ್ನು ಮುಂದುವರೆಸಿದ್ದಾರೆ.
ಅಖಾಡದಲ್ಲಿ ಇರುವ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲು ಮತ್ತು ಮತಗಳನ್ನು ಸೆಳೆಯಲು ಎರಡು ಪಕ್ಷದ ರಾಜ್ಯ ನಾಯಕರು ನಾಮಪತ್ರ ಸಲ್ಲಿಸಿಸುವ ಸಂದರ್ಭಕ್ಕೆ ಬಳ್ಳಾರಿಗೆ ಬಂದು ಬೆಂಬಲ ಸೂಚಿಸಲ್ಲಿದ್ದಾರೆ.ನಾಳೆ ಕಾಂಗ್ರೇಸ್ ಅಭ್ಯಾರ್ಥಿ ಈ.ತುಕರಾಂ ಅವರು ಸುಮಾರು 12 ಗಂಟೆಯ ಸಮಯಕ್ಕೆ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಸುಮಾರು 1.30 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೇಸ್ ಅಭ್ಯಾರ್ಥಿಯ ಪರವಾಗಿ ಡಿ.ಕೆ.ಶಿವಕುಮಾರ್, ಬಿ.ಜಡ್.ಜಮೀರ್ ಅಹಮ್ಮದ್, ಸಂತೋಷ್ ಲಾಡ್, ಸೇರಿದಂತೆ ಸುಮಾರು 50 ಸಾವಿರ ಜನರನ್ನು ಸೇರಿಸಲು ಪ್ಲಾನ್ ಮಾಡಲಾಗಿದೆ. ಇನ್ನು ಬಿಜೆಪಿಯಲ್ಲಿ ಸಹ ಏನು ಕಡಿಮೆ ಇಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಸಿನೆಮಾ ನಟಿ ಶೃತಿ, ಆನಂದ್ ಸಿಂಗ್,
ಲಕ್ಷ್ಮಿ ಅರುಣಾ ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರು ಆರ್.ಎಸ್.ಎಸ್ ಸಂಘದ ಸ್ವಯಂ ಸೇವಕರು ಪಾಲ್ಗೊಳುವರು. ನಾಳೆ ಎಂದರೆ 12 /04/24 ರಂದು ನಡೆಯುವ ನಾಮೀನೇಷನ್ ಪ್ರಕ್ರಿಯೇ ಪ್ರಾರಂಭವಾಗುತ್ತದೆ. ಅದೇ ರೀತಿಯಾಗಿ ನಾಮೀನೇಷನ್ ಪ್ರಕ್ರಿಯೆ ದಿನಾಂಕ 19/04/2024 ಕೊನೆಗೊಳ್ಳಲಿದೆ. ನಾಮಪತ್ರ ಪರಿಶೀಲನೆಯ ದಿನಾಂಕವು 21/04/24 ಕೊನೆಗೊಳ್ಳಿದೆ.ನಾಮಪತ್ರ ಹಿಂಪಡೆಯಲು 22 /04/24 ನಿಗದಿಪಡಿಸಲಾಗಿದೆ.
ಒಟ್ಟಾರೇಯಾಗಿ ಈ ಬಾರಿ ಲೋಕಸಭೆ ಚುನಾವಣೆ ಗಣಿನಾಡಲ್ಲಿ ರಂಗೇರಿದೆ.ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಶ್ರೀರಾಮುಲು ಪರಾಭವಗೊಂಡರು.ಆದರೇ ಈ ಬಾರಿ ಜನಾರ್ಧನ್ ರೆಡ್ಡಿ ಮತ್ತು ಶ್ರೀರಾಮುಲು ಅವರು ಮತ್ತೆ ಒಂದಾಗಿದ್ದಾರೆ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ಈತ ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಆಡಳಿತದಲ್ಲಿ ಇದ್ದು, ಗ್ಯಾರಂಟಿಗಳು ಕೈ ಹಿಡಿಯುತ್ತವೆ ಎಂಬ ಭರವಸೆಯಲ್ಲಿ ಗೆಲ್ಲುವುದು ನಾವೇ ಗ್ಯಾರಂಟಿ ಎಂದು ಹೇಳಲಾಗುತ್ತದೆ. ಜನರು ಯಾರನ್ನು ಕೈಯಿಡಿಯುತ್ತಾರೋ ಕಾದು ನೋಡಬೇಕಾಗಿದೆ.