ಬೆಂಗಳೂರು: ರಾಜ್ಯದಲ್ಲಿ ಹಾಸನ ಅಶ್ಲೀಲ ವಿಡಿಯೋ ಪ್ರಕರಣವು ಭಾರೀ ಸಂಚಲನ ಮೂಡಿಸಿದೆ. ವಿಡಿಯೋ ವೈರಲ್ ಆಗ್ತಿದ್ದಂತೆಯೇ ಅದರಲ್ಲಿದ್ದಾರೆ ಎನ್ನಲಾಗಿರುವ ಕೆಲವು ಸಂತ್ರಸ್ತೆ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತ ಮಹಿಳೆಯರು ಮಾತ್ರವಲ್ಲ, ಅವರನ್ನು ನಂಬಿದ ಕುಟುಂಬಗಳು ಕೂಡ ಮುಜುಗರ ಅನುಭವಿಸುತ್ತಿವೆ.
ಇನ್ನೂ ಈ ಬಗ್ಗೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಒಬ್ಬನ ಕಾಮತೃಷೆಗೆ ಬಲಿಯಾಗಿ ಅವರು ತಾವು ವಾಸ ಮಾಡುವ ಸ್ಥಳಗಳಲ್ಲಿ ತಲೆಯೆತ್ತಿ ತಿರುಗಾಡದ ಸ್ಥಿತಿ ಅವರಿಗೆ ನಿರ್ಮಾಣವಾಗಿದೆ, ಅವರ ಬಗ್ಗೆ ಎಲ್ಲರೂ ಯೋಚಿಸ ಬೇಕಿದೆ ಎಂದು ವಿನಯ್ ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
KEA Recruitment: PU ಪಾಸಾದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ.! ತಿಂಗಳಿಗೆ 42 ಸಾವಿರ ಸಂಬಳ
ರಾಜಕಾರಣದಲ್ಲಿ ಅರೋಪ ಪ್ರತ್ಯಾರೋಪಗಳು ಇದ್ದಿದ್ದೇ, ಆದರೆ ವಿಡಿಯೋಗಳಲ್ಲಿರುವ ಮಹಿಳೆಯರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ, ಒಬ್ಬನ ಕಾಮತೃಷೆಗೆ ಬಲಿಯಾಗಿ ಅವರು ತಾವು ವಾಸ ಮಾಡುವ ಸ್ಥಳಗಳಲ್ಲಿ ತಲೆಯೆತ್ತಿ ತಿರುಗಾಡದ ಸ್ಥಿತಿ ಅವರಿಗೆ ನಿರ್ಮಾಣವಾಗಿದೆ, ಅವರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ ಎಂದು ವಿನಯ್ ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)