ದೊಡ್ಡಬಳ್ಳಾಪುರ : ನಗರದ ಹಳೆಯ ಶಾಲೆಗಳಲ್ಲಿ ಒಂದಾದ ನಿವೇದಿತಾ ಆಂಗ್ಲ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಕೊಡುವ ಮೂಲಕ ಶಾಲೆಗೆ ಗೌರವ ತಂದಿದ್ದಾರೆ, SSLC ಪರೀಕ್ಷೆ ಬರೆದಿದ್ದ 35 ವಿದ್ಯಾರ್ಥಿಗಳು ಉತ್ತಿರ್ಣರಾಗಿರುವುದು ಶಾಲಾ ಆಡಳಿತ ಮಂಡಳಿಯ ಸಂತಸಕ್ಕೆ ಕಾರಣವಾಗಿದೆ.
ಶೇಕಡಾ ನೂರರಷ್ಟು ಫಲಿತಾಂಶದ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಆಡಳಿತ ವರ್ಗ ಅಭಿನಂದಿಸಿದರು.
2023-24ನೇ ಸಾಲಿನಲ್ಲಿ ನಿವೇದಿತಾ ಇಂಗ್ಲಿಷ್ ಶಾಲೆಯ 35 ವಿದ್ಯಾರ್ಥಿಗಳು SSLC ಪರೀಕ್ಷೆಯನ್ನು ಬರೆದಿದ್ದು, ಎಲ್ಲ 35 ವಿದ್ಯಾರ್ಥಿಗಳು ಉರ್ತಿರ್ಣರಾಗಿದ್ದು, ಅವರಲ್ಲಿ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ದರ್ಜೆ, 7 ದ್ವಿತೀಯ ದರ್ಜೆಯಲ್ಲಿ ಉರ್ತಿರ್ಣರಾಗಿದ್ದಾರೆ.
ಅಂಜಲಿ ಸಿರ್ವಿ ಶಾಲಾ ಮಟ್ಟದಲ್ಲಿ ಅಗ್ರ ಅಂಕಗಳನ್ನು ಪಡೆದಿದ್ದಾರೆ, ಸಿಮ್ರಾನ್ ಕುಮಾರಿ ಧಾಪ ದ್ವಿತೀಯ ಸ್ಥಾನ, ನಿಖಿಲ್ ರಾಜ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಉನ್ನತ್ತ ದರ್ಜೆಯಲ್ಲಿ ಪಾಸಾದ ನಿಖಿಲ್ ರಾಜ್ ಮಾತನಾಡಿ SSLC ಗೆ ಬರುವ ಮುನ್ನ ನನಗೆ ಓದಿನಲ್ಲಿ ಹಿಡಿತ ಇರಲಿಲ್ಲ, ಅಧ್ಯಯನ ಸರಿಯಾಗಿ ಮಾಡುತ್ತಿರಲಿಲ್ಲ, 10 ನೇ ತರಗತಿಗೆ ಬಂದ ನಂತರ ಶಿಕ್ಷಕರ ಪ್ರೋತ್ಸಾಹದಿಂದ ಓದಿನಲ್ಲಿ ಆಸಕ್ತಿ ಹೆಚ್ಚಾಗಿದು, ಪ್ರತಿದಿನ ಅಧ್ಯಯನ ಮಾಡುತ್ತಿದ್ದೆ. ಶಿಕ್ಷಕರ ಮಾರ್ಗದರ್ಶನ ಮತ್ತು ಸಲಹೆಯಿಂದ ಗರಿಷ್ಠ ಅಂಕಗಳಿಸಲು ಸಹಕಾರಿಯಾಗಿದೆ. ನಾನು ನಿರೀಕ್ಷೆ ಮಾಡಿದಷ್ಟೇ ಅಂಕಗಳು ಬಂದಿರುವುದು ನನಗೆ ಖುಷಿ ತಂದಿದೆ ಎಂದರು.
ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ತೇಜಸ್ವಿನಿ ಎಸ್ ಗೌಡ ಮಾತನಾಡಿ, ಶಿಕ್ಷಕರು ಮತ್ತು ಪೋಷಕರ ಶ್ರಮ ತುಂಬಾ ಇತ್ತು, ಪ್ರಿನ್ಸಿಪಾಲ್ ಅವರ ಗೈಡ್ ಲೈನ್ಸ್ ಸಹ ಉತ್ತಮ ಅಂಕಗಳಿಸಲು ಸಹಕಾರಿಯಾಗಿತ್ತು, 10 ನೇ ತರಗತಿಗೆ ಬರುವ ಮುನ್ನ ನಾನು ಪರೀಕ್ಷೆ ಬರೆಯಲು ಬಾಯಿ ಪಾಠ ಮಾಡುತ್ತಿದ್ದೆ, ಆದರೆ 10ನೇ ತರಗತಿಯಲ್ಲಿ ಪಾಠಗಳನ್ನ ಅರ್ಥ ಮಾಡಿಕೊಳ್ಳಲು ಆರಂಭಿಸಿದೆ ಇದು ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ. ಶಿಕ್ಷಕರು ನಮ್ಮ ಜೊತೆ ಸ್ನೇಹಿತರಂತೆ ಇದ್ದು ಪಾಠಗಳನ್ನು ಮಾಡುತ್ತಿದ್ದುದರಿಂದ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದರು.
ನಿವೇದಿತಾ ಏಜುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಜಿ.ರಾಜಣ್ಣ ಮಾತನಾಡಿ ನಮ್ಮ ಶಾಲೆ ಶೇಕಡಾ 100 ರಷ್ಟು ಫಲಿತಾಂಶ ಪಡೆಯಲು ಶಿಕ್ಷಕರ ಶ್ರಮ ಇದೆ, ಇದರಿಂದ ಶಾಲೆಗೆ ಒಳ್ಳೆಯ ಹೆಸರು ಬಂದಿದೆ, ನಮ್ಮ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರ ಮಕ್ಕಳು ಬರುತ್ತಾರೆ. ಬಡ ಮಕ್ಕಳಿಗೆ ನಾವು ಕಡಿಮೆ ಶಾಲಾ ಶುಲ್ಕವನ್ನ ತೆಗೆದು ಕೊಳ್ಳುವ ಮೂಲಕ ಪೋಷಕರ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ್ದೇವೆ, ಇದರಿಂದ ಪೋಷಕರು ಸಹ ನಮ್ಮ ಶಾಲೆಯ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದರು.
ನಿರ್ದೇಶಕರಾದ ಸಂತೋಷ ಮಾತನಾಡಿ ಶೇಕಡಾ 100 ರಷ್ಟು ಫಲಿತಾಂಶ ಬರಲು ಶಿಕ್ಷಕರು, ಶಾಲಾ ಆಡಳಿತ ಮತ್ತು ಮಕ್ಕಳ ಶ್ರಮ ಇದೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ಶಾಲೆಯಲ್ಲಿ ಮಕ್ಕಳು ಯಾವುದೇ ಒತ್ತಡ ಇಲ್ಲದೆ ಖುಷಿಯಿಂದ ಕಲಿಯುತ್ತಿದ್ದರು, ಇದರಿಂದ ಕಲಿತ ಪಾಠಗಳು ಮಕ್ಕಳ ನೆನಪಿನಲ್ಲಿ ಉಳಿದಿದೆ, ಇದರಿಂದಾಗಿ ಉತ್ತಮ ಫಲಿತಾಂಶ ಬಂದಿದೆ ಎಂದರು.
ಪ್ರಾಂಶುಪಾಲರಾದ ಪುರುಷೋತ್ತಮ್ ಮಾತನಾಡಿ 2023-24 ಸಾಲಿನ ಮಕ್ಕಳು ಶೇಕಡಾ 100 ರಷ್ಟು ಫಲಿತಾಂಶವನ್ನು ತಂದಿರುವುದು ನನಗೆ ಖುಷಿ ಕೊಟ್ಟಿದೆ, ಇತರೆ ಶಾಲೆಗಳಲ್ಲಿ ರಿಜೆಕ್ಟ್ ಮಾಡಲಾದ ಮಕ್ಕಳನ್ನು ನಮ್ಮ ಶಾಲೆಗೆ ಸೇರಿ ಕೊಳ್ಳುತ್ತೇವೆ, ಅಂತಹ ಮಕ್ಕಳನ್ನು ಪರೀಕ್ಷೆಗೆ ಸಿದ್ದಪಡಿಸುವ ಸವಾಲು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಇತ್ತು, ಅಂತಹ ಸವಾಲನ್ನು ಮೆಟ್ಟಿ ನಿಂತು ಇಂದು ಇಂತಹ ಸಾಧನೆಯನ್ನು ಮಾಡಿದ್ದೇವೆ ಎಂದರು.
ಈ ವೇಳೆ ಮುಖ್ಯ ಶಿಕ್ಷಕರಾದ ಧನಲಕ್ಷ್ಮೀ, ಆಶಾ ಸಂತೋಷ್ ಸಹ ಶಿಕ್ಷಕರಾದ ವಿಜಯ್ ಕುಮಾರ.ಹೆಚ್.ಪಿ, ಲತಾ.ಸಿ.ಎಸ್, ನೇತ್ರಾವತಿ, ಮಂಜುನಾಥ್, ಹರೀಶ್ ಕುಮಾರ್, ಲಕ್ಷ್ಮೀ, ಮಾನಸ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.
ಶೇರ್ ಮಾಡಿ: