ಬೆಂಗಳೂರು:- ಪಾಲಕರು ಗಮನಿಸಲೇಬೇಕಾದ ಮಹತ್ವದ ಸುದ್ದಿಯೊಂದು ಇಲ್ಲಿದೆ. ಶಿಕ್ಷಣ ಇಲಾಖೆ ಶನಿವಾರ ಇಡೀ ದಿನ ತರಗತಿಗಳನ್ನು ನಡೆಸುವ ಕುರಿತು ನಿರ್ದೇಶನ ನೀಡಿದೆ.
Karnataka Weather: ನಾಳೆಯಿಂದ ಕರ್ನಾಟಕದ ಹಲವೆಡೆ ಭಾರೀ ಮಳೆ ಸಾಧ್ಯತೆ…!
ಜೂನ್ 22ರಂದು ಶನಿವಾರ ರಾಜ್ಯದ ಎಲ್ಲಾ ಶಾಲೆಗಳು ಇಡೀ ದಿನ ತೆರೆದಿರಲಿದ್ದು, ಪೂರ್ಣಾವಧಿಯ ತರಗತಿಗಳು ನಡೆಯಲಿವೆ. ಅಂದರೆ ಶನಿವಾರ ಸಹ ಇಡೀ ದಿನ ಮಕ್ಕಳು ಶಾಲಾ ತರಗತಿಗಳಿಗೆ ಹಾಜರಾಗಬೇಕಿದೆ
ಈ ಕುರಿತು ಸ್ವತಃ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದ್ದು, ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಬೆಳಗ್ಗೆ 7:30ರಿಂದ 11:30ರವರೆಗೆ ಶಾಲೆಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲು ನಿರ್ದೇಶನ ನೀಡಲಾಗಿತ್ತು
ಈ ಕಾರಣ ಮರುದಿನ ಅಂದರೆ, ಜೂನ್ 22 ಶನಿವಾರದಂದು ಇಡೀ ದಿನ ಎಲ್ಲ ಶಾಲೆಗಳು ಇಡೀ ದಿನ ತರಗತಿಗಳನ್ನು ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಶುಕ್ರವಾರದ ಬದಲು ಶನಿವಾರದಂದು ಪೂರ್ಣ ದಿನ ತರಗತಿಗಳನ್ನು ತಡೆಸುವಂತೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ