ಬೆಂಗಳೂರು: ರಾಜ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರತಿಷ್ಠಿತ ಶ್ರೀಲಕ್ಷ್ಮಿಗ್ರೂಪ್ ಆಫ್ ಹಾಸ್ಪಿಟಲ್ಸ್ ಸಾರ್ವಜನಿಕರ ಸೇವೆಯಲ್ಲಿ ಇದೀಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.
ಕಳೆದ 16 ವರ್ಷಗಳಿಂದ ಲಕ್ಷ್ಮಿ ಗ್ರೂಪ್ ಆಫ್ ಹಾಸ್ಪಿಟಲ್ ತನ್ನ 3 ಶಾಖೆಗಳೊಂದಿಗೆ ಎಲ್ಲಾ ರೀತಿಯ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತ ಬಂದಿದೆ. ಇಂದು ಬೆಂಗಳೂರಲ್ಲಿ ನೂತನ ಶಾಖೆ ಶ್ರೀ ಲಕ್ಷ್ಮೀ ಗೋಬಲ್ ಹಾಸ್ಪಿಟಲ್ ಮಡಿವಾಳ, ಇದು ರಾಜ್ಯದಲ್ಲಿ ಪ್ರಪ್ರಥಮವಾಗಿ ವಿನೂತನ ಎಸ್ ಎಸ್ ಐ ಮಂತ್ರ ರೊಬೊಟಿಕ್ ಸರ್ಜರಿ ಸೆಂಟರ್, ಕಾರ್ಡಿಯಾಕ್ ಕೇರ್ ಹಾಗೂ ಹೈಟೆಕ್ ಲೇಸರ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಸುಮಲತಾ ಅಂಬರೀಶ್ʼಗೆ ಬೇರೆ ಅವಕಾಶ ಇದೆ, ಸಮಾಧಾನದಿಂದ ಇರಲಿ: ಯಡಿಯೂರಪ್ಪ!
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತುಮಕೂರು, ಸಿದ್ದಗಂಗಾ ಮಠದ ಮುಖ್ಯಸ್ಥರಾದ ಸಿದ್ದಲಿಂಗ ಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಸಚಿವರು ಮತ್ತು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಾದ ರಾಮಲಿಂಗಾರೆಡ್ಡಿ, ಬೆಂಗಳೂರು, ಕನ್ನಡ ನಟ ಡಾಲಿ ಧನಂಜಯ್, ಮಡಿವಾಳ ವಾರ್ಡ್ ನ ಬಿಬಿಎಂಪಿ ಮಾಜಿ ಮೇಯರ್ ಬಿ.ಎನ್ ಮಂಜುನಾಥ ರೆಡ್ಡಿ, ಹಾಗೂ ಆಡುಗೂಡಿ ವಾರ್ಡ್ನ ಬಿಬಿಎಂಪಿ ಮಾಜಿ ಅಧ್ಯಕ್ಷ ಮೋಹನ್.ಬಿ, ಎಸ್.ಜಿ. ವಾಳ್ಯದ ಮಾಜಿ ಕಾರ್ಪೋರೇಟರ್ ಮಂಜುನಾಥ್ ಸೇರಿದಂತೆ ಸಂಸ್ಥೆಯ ಮಾಲೀಕರಾದ ಡಾ. ಎ.ಸಿ. ಸಾಂಬಶಿವ, ಶ್ರೀಮತಿ ಡಿ. ಜಯಮಾಲಾ ಸಾಂಬಶಿವ ಹಾಗೂ ನಿರ್ದೇಶಕರಾದ ವಿಜಯ್ಾಂತ್, ರಾಘವೇಂದ್ರ ನಾಯ್ಕ ಸುಂಟ್ರಹಳ್ಳಿ ( ಸಿಇಒ), ಸಮಸ್ತ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಉಪಸ್ಥಿತರಿದ್ದರು..
ಮುಖ್ಯವಾಗಿ ಇಲ್ಲಿ ಜನರಿಗೆ ಉಪಯೋಗವಾಗುವ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಕಾರ್ಡಿಯೋಲಜಿ, ನ್ಯೂರೋ ಅಂಡ್ ಸ್ಟೈನ್, ಸರ್ಜರಿ, ಕ್ಯಾತ್ಲ್ಯಾಬ್, ಸಿಟಿ ಸ್ಕ್ಯಾನ್, ಕ್ಷ ಕಿರಣ, 2ಡಿ ಎಕೋ. ಅಲ್ಟಾಸೌಂಡ್ ಸ್ಕ್ಯಾನ್, ಟಿಎಂಟಿ, ಇಸಿಜಿ, ಐಸಿಯು, ಎನ್.ಐ.ಸಿ.ಯು ಜನರಲ್, ಪ್ರೈವೇಟ್ವಾರ್ಡ್, ಫಾರ್ಮಸಿ, ಲ್ಯಾಬೋರೇಟರಿ, 24/7 ಎಮರ್ಜೆನ್ನಿ ಮತ್ತು ಟ್ರಾಮಾ ಕೇರ್, ಹೈಟೆಕ್ ಲೇಸರ್ ಸೆಂಟರ್ ಫಾರ್ ಕಿಡ್ನಿ ಸ್ಟೋನ್ ಅಂಡ್ ಪ್ರೊಸ್ಟೇಟ್ ಸೇರಿದಂತೆ ಈ ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ ಕೈಗೆಟಕುವ ದರದಲ್ಲಿ ದೊರೆಯುತ್ತವೆ.