ನೆಲಮಂಗಲ: ಕತ್ತು ಕೊಯ್ದ ಯುವಕನ ಬರ್ಭರ ಕೊಲೆ ನಡೆದ ಘಟನೆ ನೆಲಮಂಗಲ ಸಮೀಪದ ಸೆಂಚುರಿ ಪಾರ್ಕ್ ಬಡಾವಣೆ ರೈಸ್ ಮಿಲ್ ಹಿಂಭಾಗ ಹುಸ್ಕೂರು ಬಳಿ ಜರುಗಿದೆ. ಶ್ರೀನಿವಾಸ್ 28 ಮೃತ ಆಟೋ ಚಾಲಕ.
ಮೃತ ಶ್ರೀನಿವಾಸ್ ಮೂಲತಃ ಬೆಂಗಳೂರಿನ ತಣಿಸಂದ್ರ ಮೂಲದವ ಎನ್ನಲಾಗಿದೆ. ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದು ಕೊಲೆ ಶಂಕೆ ವ್ಯಕ್ತವಾಗಿದೆ.
ಸ್ಥಳಯರ ಮಾಹಿತಿ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.