ಬೆಂಗಳೂರು: ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಸಂಧಾನಸಭೆ ವಿಫಲವಾಗಿದೆ ಎಂದು ಮೂಲಗಳು ತಿಳಿಸಿದೆ.
ವೀಣಾ ಕಾಶಪ್ಪನವರ್ ಬಂಡಾಯ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ಇಂದು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಟಿಕೆಟ್ ನೀಡುವಂತೆ ವೀಣಾ ಕಾಶಪ್ಪನವರ್ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.
ಮುಂದೊಂದು ದಿನ ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ಗೆ ಇಲ್ಲದಂತಾಗಲಿದೆ: ಬಿ.ಎಸ್.ಯಡಿಯೂರಪ್ಪ
ಬಿಜೆಪಿಯವರು 2 ತಿಂಗಳ ಹಿಂದೆಯೇ ನನಗೆ ಫೋನ್ ಮಾಡಿದ್ರು, ಬಿಜೆಪಿಯಿಂದ ಟಿಕೆಟ್ ಕೊಡ್ತೀವಿ ಬನ್ನಿ ಎಂದ್ರು, ಆದ್ರೆ ನಾನು ಪಕ್ಷ ನಿಷ್ಠೆಯಿಂದ ಹೋಗಲ್ಲ ಎಂದೆ ಈಗಲೂ ಸಹ ಬಿಜೆಪಿಯಿಂದ ಕರೆಗಳು ಬರ್ತಿದೆ ಯಾವುದೇ ತೀರ್ಮಾನ ಮಾಡಿಲ್ಲ, ಕಾರ್ಯಕರ್ತರ ತೀರ್ಮಾನ ಏನಾಗುತ್ತೆ ನೋಡೋಣ ಎಂದರು
ಹಾಗೆ ಸೊಪ್ಪು ಹಾಕದ ಸಿಎಂ ಮತ್ತ ಡಿಸಿಎಂ, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ನಿನ್ನ ಒಳ್ಳೆಯ ಕೆಲಸದ ಬಗ್ಗೆ ನಮಗೂ ಅರಿವಿದೆ. ಆದರೇ, ಟಿಕೆಟ್ ಘೋಷಣೆ ನಿರ್ಧಾರ ಹೈಕಮಾಂಡ್ ತೀರ್ಮಾನ, ಸದ್ಯಕ್ಕೆ ಟಿಕೆಟ್ ಬದಲಾವಣೆಯ ಪ್ರಶ್ನೆಯೆ ಇಲ್ಲ, ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ, ಚುನಾವಣೆ ಮುಗಿದ ಬಳಿಕ ಒಳ್ಳೆಯ ಸ್ಥಾನ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ, ದುಡುಕಿ ನಿರ್ಧಾರವನ್ನು ಕೈಗೊಳ್ಳದಂತೆ ಸಿಎಂ, ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ.
ಸಂಧಾನಸಭೆಯಲ್ಲಿ ಸಿಎಂ ಮಾತುಗಳನ್ನು ಕೇಳುತ್ತಲೇ ಕಣ್ಣೀರು ಹಾಕುತ್ತ ವೀಣಾ ಕಾಶಪ್ಪನವರ್ ಯಾವುದೇ ಉತ್ತರ ನೀಡದೇ ಹೊರ ನಡೆದಿದ್ದು ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.