ಕಲಬುರಗಿ: ಕಲಬುರಗಿಯಲ್ಲಿ 100 ಎಕರೆ ಪ್ರದೇಶದಲ್ಲಿ ಜಾನಪದ ಲೋಕ ಸೃಷ್ಟಿ ಅತಿ ಅಗತ್ಯ ಎಂದು ಲೋಕಸಭಾ ಸದಸ್ಯರಾದ ಉಮೇಶ್ ಜಾಧವ್ ತಿಳಿಸಿದರು. ಪಂಡಿತರಂಗ ಮಂದಿರದಲ್ಲಿ ನಡೆದ ಜಿಲ್ಲಾ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ಹಾವೇರಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಕಲ್ಬುರ್ಗಿಯಲ್ಲಿ ಜಾನಪದ ಲೋಕ ನಿರ್ಮಾಣ ಮಾಡುವುದರ ಮೂಲಕ ಈ ಭಾಗದ ಜಾನಪದ ಕಲಾ ಶ್ರೀಮಂತಿಕೆಯನ್ನು ಕಾರ್ಯ ಆಗಬೇಕಾಗಿದೆ.
ಇದಕ್ಕಾಗಿ ಸ್ಥಳವನ್ನು ಗುರುತಿಸಲು ಸರ್ಕಾರದ ಜೊತೆ ತಾನು ನೆರವಾಗುವುದಾಗಿ ಹೇಳಿದರು.ಸಮ್ಮೇಳನದಲ್ಲಿ ಮೂಡಿಬಂದ ಕನ್ನಡಕ್ಕಿರುವ ಆತಂಕ ಮತ್ತು ಸವಾಲುಗಳನ್ನು ಮೆಟ್ಟಿ ನಿಲ್ಲಲು ಮತ್ತು ನಿರುದ್ಯೋಗ ಹಾಗೂ ವಲಸೆ ತಡೆಗೆ ಚಿಂತನೆ ಮಾಡಬೇಕಾಗಿದೆ.ಕಲಬುರಗಿ ಮೆಗಾ ಜವಳಿ ಪಾರ್ಕ್ 10ಸಾವಿರ ಕೋಟಿ ವೆಚ್ಚದಲ್ಲಿ 1ಲಕ್ಷ ನೇರ ಉದ್ಯೋಗ ಸೃಷ್ಟಿಯಾಗುತ್ತದೆ.. ಕನ್ನಡಿಗರು ಇದರ ಲಾಭ ಪಡೆಯಬೇಕು ಅಂತ ಹೇಳಿದ್ರು..