ಬೆಂಗಳೂರು: ಎನ್ಡಿಎ ಸರ್ಕಾರವು ಪ್ರಮಾದವಶಾತ್ ರಚನೆಯಾಗಿದೆ. ಅದು ಯಾವುದೇ ಸಮಯದಲ್ಲಿ ಪತನ ಗೊಳ್ಳಬಹುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. ಮಿತ್ರಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಿರುವ ಭಾರತೀಯ ಜನತಾ ಪಕ್ಷವು, ತನ್ನ ಮೈತ್ರಿಕೂಟವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ ಎಂಬ ವದಂತಿಗಳ ನಡುವೆ ಖರ್ಗೆ ಈ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಎಐಸಿಸಿ ಅಧ್ಯಕ್ಷ, “ಎನ್ಡಿಎ ಸರ್ಕಾರವನ್ನು ಪ್ರಮಾದವಶಾತ್ ರಚಿಸಲಾಗಿದೆ. ಮೋದಿ ಅವರಿಗೆ ಜನಾದೇಶ ಇಲ್ಲ. ಇದು ಅಲ್ಪಸಂಖ್ಯಾತ ಸರ್ಕಾರ. ಈ ಸರ್ಕಾರ ಯಾವುದೇ ಸಮಯದಲ್ಲಿ ಬೇಕಾದರೂ ಬೀಳಬಹುದು” ಎಂದು ಭವಿಷ್ಯ ನುಡಿದರು.
ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!
“ಆದರೆ ನಾವು ಸರ್ಕಾರ ಮುಂದುವರಿಯುವುದನ್ನು ಬಯಸುತ್ತೇವೆ. ದೇಶದ ಒಳಿತಿಗಾಗಿ ಅದು ಉಳಿಯಲಿ. ನಾವು ದೇಶವನ್ನು ಬಲಪಡಿಸಲು ಜತೆಗೂಡಿ ಕೆಲಸ ಮಾಡಬೇಕು” ಎಂದು ಹೇಳಿದರು. “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೂ ಚೆನ್ನಾಗಿ ನಡೆಯಲು ಅವಕಾಶ ನೀಡದಂತಹ ಅಭ್ಯಾಸವಿದೆ. ಆದರೆ ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಸಹಕಾರ ನೀಡುತ್ತೇವೆ” ಎಂದು ತಿಳಿಸಿದರು.