ಹುಬ್ಬಳ್ಳಿ : ತಾಲೂಕಿನ ವರೂರಿನ ಎ.ಜಿ.ಎಂ.ರೂರಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವರೂರು ಇಂಜಿನಿಯರಿಂಗ್ ಕಾಲೇಜ್ ನಲ್ಲಿ “ನ್ಯಾಷನಲ್ ಟೆಕ್ನೋ ಕಲ್ಚರಲ್ ಪೆಸ್ಟ್ ಅಗ್ರತ್ತಾ 2k24 ” ಕನ್ನಡದ ಖ್ಯಾತ ರಾಪರ್ ಚೆಂದನ ಶೆಟ್ಟಿ ಅವರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಎ.ಜಿ.ಎಂ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸ್ವಸ್ತಿ ಶ್ರೀ 105 ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಯವರು,
ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನೇರವೇರಿಸಲಾಯಿತ್ತು ಶಿಕ್ಷಣದ ಜೊತೆಗೆ ಮಕ್ಕಳ ಬದುಕಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಿಕೆಗೆ ಪೂರಕವಾದ ವಾತಾವರಣ ಒದಗಿಸಲಿವೆ ಹಾಗಾಗಿ ನಮ್ಮ ಸಂಸ್ಥೆಯು ಪಠ್ಯದ ಜೊತೆ ಪಠ್ಯತರ ಚಟುವಟಿಕೆಯನ್ನು ಸಹ ಮುನ್ನಡೆಕೊಂಡು ಬರುತ್ತಿದೆ ಈ ಚಟುವಟಿಕೆಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆರ್ಶಿವಧಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಬಿಸಿಲ ಉರಿಗೆ ಬೆಂದ ಜನರು.! ಬಿಸಿಲ ಬೇಗೆಯಿಂದ ಪಾರಾಗಲು ಹೀಗೆ ಮಾಡಿ ಸಾಕು..
ನಂತರ ಸಂಸ್ಥೆಯ ನಿರ್ದೇಶಕರಾದ ಪ್ರೊ ಸಂದೀಪ ಕ್ಯಾತನವರಮಾತನಾಡಿ ,ನಮ್ಮ ಸಂಸ್ಥೆಯು ಕಲಿಕೆಯನ್ನ ಅರ್ಥಪೂರ್ಣಮಾಡುವ ಸಲುವಾಗಿಯೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಷ್ಟೇ ಅಲ್ಲದೆ ಇದು ನಮ್ಮ ಸಂಸ್ಥೆಯ ನವೀನವಾದ ಕಾರ್ಯಕ್ರಮವಾಗಿದೆ ಪ್ರಪ್ರಥಮ ಬಾರಿಗೆ ನಮ್ಮ ಸಂಸ್ಥೆಯಿಂದ “ನ್ಯಾಷನಲ್ ಟೆಕ್ನೋ ಕಲ್ಚರಲ್ ಪೆಸ್ಟ್ ಅಗ್ರತ್ತಾ 2k24″ಹಮ್ಮಿಕೊಂಡಿದ್ದು, ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರು ಸಹ ಭಾಗವಹಿಸಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)