ಕಳೆದ ವರ್ಷ ಆಗಸ್ಟ್ 23ರಂದು ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿನ ‘ಶಿವ ಶಕ್ತಿ’ ಬಿಂದುವಿನಲ್ಲಿ ಇಳಿದ ಸಾಧನೆಯನ್ನು ಸ್ಮರಿಸಲು ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ.
ಇಸ್ರೋ ನಿರೀಕ್ಷಿತ ಚಂದ್ರಯಾನ-3 ಯಶಸ್ವಿಯಾಗಿ ಮಂಗಳವಾರಕ್ಕೆ ಒಂದು ವಾರ ಪೂರ್ತಿಯಾಗಿದೆ. ಇದುವರೆಗೆ ಅದರ ಕಾರ್ಯ ನಿರ್ವಹಣೆಯಿಂದ ತೃಪ್ತಿಯಾಗಿದೆ ಮತ್ತು ಶಶಾಂಕನ ಮೇಲೆ ತಾಪಮಾನ ಯಾವ ರೀತಿ ಏರಿಳಿತವಾಗುತ್ತದೆ ಎಂಬ ಐತಿಹಾಸಿಕ ಹಾಗೂ ಮೊದಲ ಮಾಹಿತಿಯನ್ನು ಪ್ರಜ್ಞಾನ್ ರೋವರ್ ರವಾನೆ ಮಾಡಿದೆ. ಇದಲ್ಲದೆ, ಆ ಪ್ರದೇಶದಲ್ಲಿ ಉಂಟಾಗುವ ಕಂಪನಗಳು, ಇರಬಹುದಾದ ಖನಿಜ ಲವಣಗಳು, ನೀರಿನ ಅಂಶದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಕಳುಹಿಸುವ ನಿರೀಕ್ಷೆಯನ್ನು ಇಸ್ರೋ ಹೊಂದಿದೆ. ಸೋಮವಾರ ರೋವರ್ ಎರಡು ಕುಳಿಗಳನ್ನು ತಪ್ಪಿಸಿ ಮುಂದುವರಿದಿರುವ ಬಗ್ಗೆ ಫೋಟೋ ಸಹಿತ ಮಾಹಿತಿಯನ್ನು ಕಳುಹಿಸಿಕೊಟ್ಟಿತ್ತು.
ಒಂದು ತಿಂಗಳ ಕಾಲ ನಡೆಯಲಿರುವ, ಭಾರತದ ಮೊದಲ ‘ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ’ಗೆ ಸರ್ಕಾರ ಆಗಸ್ಟ್ 23, 2024ರಂದು ಅಧಿಕೃತ ಚಾಲನೆ ನೀಡಲಿದೆ. ಕಳೆದ ವರ್ಷ ಆಗಸ್ಟ್ 23ರಂದು ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿನ ‘ಶಿವ ಶಕ್ತಿ’ ಬಿಂದುವಿನಲ್ಲಿ ಇಳಿದ ಸಾಧನೆಯನ್ನು ಸ್ಮರಿಸಲು ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ.
ಈ ವಿಶೇಷ ದಿನದಂದು ಭಾರತದ ಮಹತ್ತರ ಬಾಹ್ಯಾಕಾಶ ಯೋಜನೆಗಳನ್ನು ಸ್ಮರಿಸಲು ಮತ್ತು ಯುವಕರಲ್ಲಿ ಸ್ಪೂರ್ತಿ ತುಂಬಲು ‘ಟಚಿಂಗ್ ಲೈವ್ಸ್ ವೈಲ್ ಟಚಿಂಗ್ ದ ಮೂನ್: ಇಂಡಿಯಾಸ್ ಸ್ಪೇಸ್ ಸಾಗಾ’ (ಚಂದ್ರನನ್ನು ಸ್ಪರ್ಶಿಸುತ್ತಾ ಜನಜೀವನಕ್ಕೆ ಸ್ಪರ್ಶ: ಭಾರತದ ಬಾಹ್ಯಾಕಾಶ ಯಾನ) ಎಂಬ ಧ್ಯೇಯವಾಕ್ಯವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಹೊಂದಿದೆ. ಭಾರತದ ಬಾಹ್ಯಾಕಾಶ ಯೋಜನೆಗಳು ಚಂದ್ರನನ್ನು ಮುಟ್ಟುವುದಕ್ಕೆ ಮಾತ್ರವೇ ಸೀಮಿತವಾಗಿರದೆ, ಜನರ ದೈನಂದಿನ ಜೀವನವನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ ಎಂದು ಈ ಥೀಮ್ ಸಾರುತ್ತದೆ.
ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದ ನಡೆ ದೈನಂದಿನ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಈ ಸಾಧನೆಗಳು ಸಂವಹನ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಅಭಿವೃದ್ಧಿ ತಂದು, ಸಂಚರಣೆ (ನ್ಯಾವಿಗೇಶನ್) ಹಾಗೂ ವಿಪತ್ತು ನಿರ್ವಹಣೆಗೆ ನೆರವು ನೀಡಿವೆ.