ಹುಬ್ಬಳ್ಳಿ: ಮಹಾತ್ಮ ಗಾಂಧಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಎಂದು ಬಹುತೇಕ ಜನರು ಕೊಂಡಾಡಿದ್ದಾರೆ ಇನ್ನು ಕೊಂಡಾಡುತ್ತಾರೆ ಆದರೆ ಇಲ್ಲೊಬ್ಬ ಹಿಂದು ಪರ ಸಂಘಟನೆಗಳ ಮುಖಂಡ ಗಾಂಧೀಜಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಮಾಡುವ ಮೂಲಕ ದೇಶದ್ರೋಹ ಎಸಗಿದ್ದಾರೆ ಆದ್ದರಿಂದ ಗಾಂಧೀಜಿ ಕೊಲೆಗಾರ ನಾಥೋರಾಮ್ ಗೋಡ್ಸೆ್ ಅವರೇ ನಿಜವಾದ ದೇಶಭಕ್ತ ಅಂತಾ ನಾಥೋರಾಮ್ ಗೋಡ್ಸೆ್ ಅವರ ಭಾವಚಿತ್ರವನ್ನ ತಮ್ಮ ಕಾರು ಹಿಂದುಗಡೆಯ ಗ್ಲಾಸ್ ಗೆ ಅಳವಡಿಕೆ ಮಾಡಿಕೊಂಡಿದ್ದಾರೆ.
ಹೌದು.. ಇಡೀ ನಾಡಿಗೆ ನಾಡೇ ಮೋಹನ್ ದಾಸ್ ಕರಮಚಂದ್ರ ಗಾಂಧೀ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಛಾಪು ಒತ್ತಿದವರು ಇಡೀ ಬದುಕನ್ನ ಇತಿಹಾಸ ಪುಟದಲ್ಲಿ ಸುವರ್ಣಾ ಅಕ್ಷಗಳಿಂದ ಬರೆದುವಂತೆ ಮಾಡಿದ್ದವರು.ಆದರೆ ಇಂದು ಅದೇ ಮಹಾತ್ಮ ಗಾಂಧೀಜೀಯವರು ದೇಶದ್ರೋಹ ಕೆಲಸ ಮಾಡಿದ್ದಾರೆ. ಭಾರತ ಪಾಕಿಸ್ತಾನ ವಿಭಜನೆ ಮೂಲಕ ನಾಡಿಗೆ ದ್ರೋಹ ಬಗೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಇಲ್ಲೊಬ್ಬ ಹಿಂದು ಸಂಘಟನೆಗಳ ಮುಖಂಡರು.
ಪದೇ, ಪದೇ ಮೂತ್ರ ವಿಸರ್ಜನೆ ಹೋಗ್ತಿದ್ರೆ ಜೋಪಾನ! ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ
ಕಾರ್ ಗ್ಲಾಸ್ ಹಿಂದುಗಡೆ ಮಹಾತ್ಮ ಗಾಂಧಿ ಕೊಲ್ಲೆಗಾರ ನಾಥೋರಾಮ್ ಗೋಡ್ಸೆ್ ಭಾವಚಿತ್ರ ಹಾಕಿಕೊಂಡ ಶ್ರೀರಾಮ ಸೇನೆ ಮುಖಂಡ ತಮ್ಮ ವಿಚಾರವನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವಿಯವರಾದ
ಗದಿಗೆಪ್ಪ ಕುರುವತ್ತಿ ನಾಥೋರಾಮ್ ಗೋಡ್ಸ್ ಭಾವಚಿತ್ರ ಹಾಕಿಕೊಂಡು ತಮ್ಮ ನಿಲುವನ್ನು ಹೊರಹೊಮ್ಮಿಸಿದ್ದಾರೆ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಧಾರವಾಡ ವಿಭಾಗೀಯ ಅಧ್ಯಕ್ಷ ಗದೆಗೆಪ್ಪ ಕುರುವತ್ತಿ ಅವರುಭಾರತ ಪಾಕಿಸ್ತಾನ ದೇಶವಿಭಜನೆ ಮಾಡಿದ ಗಾಂಧೀಜಿ ಕೊಲೆ ಮಾಡಿದ್ದು ಸರಿಯಾಗಿದೆ.
ನಾಥೋರಾಮ್ ಗೋಡ್ಸೆ್ ದೇಶಪ್ರೇಮಿ, ರಾಷ್ಟ್ರಭಕ್ತ ಎಂದಿರುವ ಅವರು, ನಾಥೋರಾಮ್ ಗೋಡ್ಸೆ್ ಅವರ ವಿಚಾರ ಧಾರೆ ಪಸರಿಸಲು ಭಾವಚಿತ್ರ ಅಳವಡಿಕೆ ಮಾಡಿಕೊಳ್ಳಲಾಗಿದ್ದು, ಯಾವುದೇ ಕಾರಣಕ್ಕೋ ನಾಥೋರಾಮ್ ಗೋಡ್ಸೆ್ ಭಾವಚಿತ್ರ ತೆಗೆಯಲ್ಲನಾಥೋರಾಮ್ ಗೋಡ್ಸೆ್ ದೇಶ ಕಂಡ ಅಪ್ರತಿಮ ದೇಶ ಭಕ್ತ ಆಗಿದ್ದಾರೆ. ಆದರೆ ನಾಥೋರಾಮ್ ಗೋಡ್ಸೆ್ ಅವರ ಭಾವಚಿತ್ರ ಹಾಕಿಕೊಂಡ ಬಳಿಕ ನನಗೆ ಸಾಕಷ್ಟು ಬೆದರಿಕೆ ಕರೆ ಬಂದಿವೆ. ಹಲ್ಲೆಗೆ ಯತ್ನ ಸಹ ನಡೆದಿದ್ದು, ಹಿಂದು ಕಾರ್ಯಕರ್ತರ ಬೆಂಬಲ ಇದೆ. ಯಾವುದೇ ಕಾರಣಕ್ಕೋ ನಾನು ಯಾವುದಕ್ಕೋ ಹೆದರಲ್ಲ ಬೆದರಲ್ಲ ಎಂದರು.