ಬಾಗಲಕೋಟೆ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇವೆ. ಈ ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ ಗದ್ದಿಗೌಡರವರ ಅಭಿವೃದ್ಧಿ ಮತ್ತು ಭಾರತ ದೇಶ ಪ್ರದಾನ ನರೇಂದ್ರ ಮೋದಿ ಅವರ ಅದ್ಭುತ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಮತವನ್ನು ಕೊಟ್ಟು ಆಯ್ಕೆ ಮಾಡುತ್ತಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.ದೇಶದಲ್ಲಿ ಮೋದಿ ಪರ್ವ ಇದೆ ಹಾಗಾಗಿ ಬಿಜೆಪಿ ಗೆಲುವು ಶತಸಿದ್ಧ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮಣ್ಣ ಹುಲಕುಂದ. ಮಹಾದೇವ ಕೋಟ್ಯಾಳ. ಈಶ್ವರ ನಾಗರಾಳ. ಬಸವರಾಜ ಅಮ್ಮನಿಗಿಮಠ. ಯಲ್ಲಪ್ಪ ತಳವಾರ. ಶ್ರೀಶೈಲ ದಲಾಲ. ಶ್ರೀಶೈಲ ಆಲಗುರ ಸೇರಿದಂತೆ ಮುಂತಾದವರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ