ಕಲಬುರಗಿಯಲ್ಲಿ ಅಚ್ಚರಿಯ ಪವಾಡವೊಂದು ನಡೆದಿದ್ದು ಜನ ಮರುಳೋ ಜಾತ್ರೆ ಮರುಳೋ ಅನ್ನುವಂತಾಗಿದೆ..ಹೌದು ಚಿತ್ತಾಪುರ ತಾಲೂಕಿನ ಪೇಠಶಿರೂರು ಗ್ರಾಮದಲ್ಲಿನ ಮಹಾದೇವನ ಗುಡಿಗೆ ಬಿಟ್ಟ ಗೂಳಿ ಮರಿಯೊಂದು ಅಂದ್ರೆ ನಂದಿಯೊಂದು ನಿತ್ಯವೂ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದೆ..
ವಿಶೇಷ ಅಂದ್ರೆ ಕಣ್ಣೇ ಕಾಣದ ಈ ನಂದಿ ಕಳೆದ ಮೂರು ತಿಂಗಳಿಂದ ಪ್ರದಕ್ಷಣೆ ಹಾಕುತಿದ್ದು ನಂದಿಯ ಈ ಕಾರ್ಯ ನೋಡಿದ ಗ್ರಾಮಸ್ಥರು ಇದೊಂದು ಪವಾಡ ಅಂತ ಮಾತಾಡ್ತಿದ್ದಾರೆ.. ಅಂದಹಾಗೆ ಗೂಳಿಯನ್ನ ಎಡಗಡೆಗೆ ತಂದು ನಿಲ್ಲಿಸಿದರೂ ಬಲಗಡೆಯಿಂದ ಪ್ರದಕ್ಷಿಣೆ ಹಾಕುತ್ತಂತೆ..ನಂದಿಯ ಭಕ್ತಿಭಾವ ನೋಡಲು ಇದೀಗ ದೇಗುಲಕ್ಕೆ ಭಕ್ತರ ದಂಡು ಹರಿದು ಬರ್ತಿದೆ..