ಲೋಕ ಸಭೆ ಗದ್ದುಗೆಯನ್ನ ಮೂರನೇ ಬಾರಿಗೆ ಹಿಡಿಯುವ ಸಂಕಲ್ಪ ಮಾಡಿರುವ ಪ್ರಧಾನಿ ಮೋದಿ ನಾಳೆ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ.. aicc ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರೂರಿನಿಂದಲೇ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.. ಮಧ್ಯಾನ 2 ಗಂಟೆಗೆ ಆಗಮಿಸುವ ನಮೋ ಎನ್ ವಿ ಮೈದಾನದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ಇದಕ್ಕೂ ಮುನ್ನ ರಸ್ತೆ ಮೂಲಕ ಪೋಲೀಸ್ ಹೆಲಿಪ್ಯಾಡಿಂದ ಆಗಮಿಸಲಿದ್ದಾರೆ.ಮೋದಿಯವರ ಆಗಮನದಿಂದ ಸಂಸದ ಉಮೇಶ್ ಜಾಧವ್ ಎಲೆಕ್ಷನ್ ಉಸ್ತುವಾರಿ ರಾಜೂಗೌಡ ಮಾಜಿ ಶಾಸಕ ದತ್ತು ಪಾಟೀಲ್ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಶಿವರಾಜ ಪಾಟೀಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ.. ಮೋದಿ ಆಗಮನ ಹಿನ್ನಲೆ ಇದೇವೇಳೆ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ..