ಮಂಡ್ಯ:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕ್ರೈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ಕೊಲೆ ಕೇಸ್ ಗಳು ನಡೆಯುತ್ತಿದೆ.
U19 Asia Cup 2024: ಟೀಮ್ ಇಂಡಿಯಾ ಕೈ ತಪ್ಪಿದ ಏಷ್ಯನ್ ಕಿರೀಟ ಬಾಂಗ್ಲಾ ಪಾಲು!
ಅದರಂತೆ ಮಂಡ್ಯದಲ್ಲೊಂದು ಸಕ್ಕರೆ ನಾಡಿನ ಮಂದಿಯನ್ನ ಬೆಚ್ಚಿ ಬೀಳಿಸಿದ ಘಟನೆ ಒಂದು ಜರುಗಿದೆ.
ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆಯ ಮೇಲೆ ಹೆಂಡತಿಯ ಅಕ್ಕನ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
45 ವರ್ಷದ ನಾಗೇಶ್ ಕೊಲೆಯಾದ ದುರ್ದೈವಿ ಎನ್ನಲಾಗಿದೆ. ಕೊಲೆ ಆರೋಪಿ ನಾಗೇಶ್ನ ಪತ್ನಿ ಜೊತೆ ಭಾವನೇ ಆದ ಮತ್ತೊಬ್ಬ ನಾಗೇಶ್ (ಹತ್ಯೆಯಾದ ವ್ಯಕ್ತಿ) ಎಂಬಾತ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ಕೆರಳಿದ ಆರೋಪಿ ನಾಗೇಶ್, ಆತನನ್ನು ಮುಗಿಸಲೇಬೇಕು ಎಂದು ಪಕ್ಕ ಪ್ಲ್ಯಾನ್ ಮಾಡಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಕೊಲೆಯಾದ ನಾಗೇಶ್ ಹಾಗೂ ಆರೋಪಿ ನಾಗೇಶ್ ನ ಎರಡು ಕುಟುಂಬಗಳು ಬೆಂಗಳೂರಿನ ನಾಗಸಂದ್ರದಲ್ಲಿ ವಾಸವಾಗಿದ್ದರು. ಒಂದೇ ಏರಿಯಾದಲ್ಲಿ ಮನೆ ಮಾಡಿಕೊಂಡು ಇದ್ದರು. ಕೊಲೆಯಾದ ನಾಗೇಶ್ ಆಟೋ ಚಾಲಕನಾಗಿದ್ದರೇ, ಆರೋಪಿ ನಾಗೇಶ್ ಪ್ಯಾಕರ್ಸ್ ಅಂಡ್ ಮೂವರ್ಸ್ ಕೆಲಸ ಮಾಡುತ್ತಿದ್ದ. ಒಂದೇ ಮನೆಯ ಅಳಿಯಂದಿರೂ ಆಗಿದ್ದರು ಸಾಕಷ್ಟು ಸ್ನೇಹಿತರ ತರ ಇದ್ದರು. ಕಳೆದ ಹಲವು ದಿನಗಳಿಂದಲೂ ಒಟ್ಟಿಗೆ ಪಾರ್ಟಿ ಕೂಡ ಮಾಡುತ್ತಿದ್ದರು.
ವಾರದ ಹಿಂದೆ ಸಹ ಒಟ್ಟಿಗೆ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೂ ಹೋಗಿ ಬಂದಿದ್ದರು. ಆದರೆ ಆರೋಪಿ ನಾಗೇಶ್ ಗೆ ಪತ್ನಿಯ ಶೀಲದ ಮೇಲೆ ಶಂಕೆ. ಸ್ವತಃ ಬಾವನೇ ನಾದಿನಿ ಜೊತೆ ಆಕ್ರಮ ಸಂಬಂಧವೊಂದಿದ್ದಾನೆ ಎಂಬ ಶಂಕೆ ಇತ್ತು. ಹೀಗಾಗಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಗ್ರಾಮದ ಸಮೀಪವೇ ಕರೆದುಕೊಂಡು ಬಂದಿದ್ದಾನೆ
ಬಳಿಕ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ರಾತ್ರಿ 10.30 ಸುಮಾರಿಗೆ ನಾಗೇಶ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಮಾರನೇ ದಿನ ಮೃತದೇಹವನ್ನ ಸ್ಥಳೀಯರು ನೋಡಿ ಪೊಲೀಸರ ಮಾಹಿತಿ ನೀಡಿದ್ದರು ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.