ಬೆಂಗಳೂರು:- ನಗರದ ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬ್ಲಾಸ್ಟ್ ಹೇಗೆ ಸಂಭವಿಸಿದೆ ಇನ್ನೂ ಗೊತ್ತಾಗಿಲ್ಲ, ಪೊಲೀಸ್ ಕಮೀಶನರ್, ಬಾಂಬ್ ಸ್ಕ್ವ್ಯಾಡ್ ಮತ್ತು ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಅಲ್ಲಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದಾರೆ. ಸ್ಫೋಟದ ಮೂಲ ಪತ್ತೆಯಾಗಲು ಸಮಯ ಹಿಡಿಯಲಿದೆ ಎಂದು ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಘಟನೆಯಲ್ಲಿ 9 ಜನ ಗಾಯಗೊಂಡಿದ್ದಾರೆ, ಯಾರೂ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿಲ್ಲ, ತಾವು ಸಾಧ್ಯವಾದರೆ ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಹೇಳಿದರು. ಐಈಡಿ ಸ್ಫೋಟ ಅಂತ ಸಂಶಯ ವ್ಯಕ್ತಡಿಸಲಾಗುತ್ತಿದೆಯಾದರೂ ಅದಿನ್ನೂ ಖಚಿತಪಟ್ಟಿಲ್ಲ, ಸ್ಯಾಂಪಲ್ ಗಳ ಪರಿಶೀಲನೆ ಬಳಿಕವೇ ಸ್ಫೋಟಕ ವಸ್ತುವಿನ ಬಗ್ಗೆ ಗೊತ್ತಾಗಲಿದೆ, ಇದು ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ಹೀಗಿರಬಹುದು ಹಾಗಿರಬಹುದು ಎಂದು ಹೇಳಲಾಗದು ಎಂದು ಪರಮೇಶ್ವರ್ ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)