ಬೆಂಗಳೂರು: ಅದೊಂದು ಸಾವು ಇನ್ನೂ ಅನುಮಾನಸ್ಪದವಾಗಿಯೇ ಇದೆ. ಅದಕ್ಕೆ ಪೂರಕವಾಗಿ ಒಂದಷ್ಟು ಶಂಕೆಗಳೂ ಕೂಡ ಅದಕ್ಕೆ ಪೂರಕವಾಗಿಯೇ ಇದೆ. ಹೀಗಾಗಿ ಪೊಲೀಸರಿಗೂ ಕೂಡ ಈ ಸಾವು ಅಸಹಜ ಎನಿಸಿದೆ . ಯಸ್ ಯುವತಿಯ ಹತ್ಯೆ ನಡೆದಿದ್ಯಾ ಎಂಬ ಅನುಮಾನ ಶುರುವಾಗಿದೆ. ಅದರ ಡೀಟೇಲ್ಸ್ ಇಲ್ಲಿದೆ. ದೂರುದಾರರು ಕೊಟ್ಟಂತಹ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಹಿನ್ನಲೆ ತನಿಖೆ ಶೀಘ್ರವಾಗಿ ಮುಂದುವರೆದಿದೆ. ಯಸ್ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಭುದ್ದಾ ಎಂಬಾಕೆಯ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೆತ್ತವಳು ಶಂಕಿಸಿ ದೂರು ನೀಡಿದ್ದಾರೆ.
ಆಕೆಗಿನ್ನೂ ಕೇವಲ 20 ವರ್ಷ . ಒಂದು ಸುಂದರ ಬದುಕಿತ್ತು. ಕಳೆದ 15 ನೇ ತಾರೀಕಿನಂದು ಆಕೆಯ ತಾಯಿಗೆ ಕರೆ ಮಾಡಿ ಚೆನ್ಬಾಗಿಯೆ ಮಾತನಾಡಿದ್ಲು . ಹೆತ್ತವಳಿಗೆ ಮಗಳ ನಡವಳಿಕೆಯಲ್ಲಿಯೆ ಗೊತ್ತಾಗಿ ಬಿಡುತ್ತೆ. ಆದರೆ ಅಂದು ಆಕೆಯ ನಡವಳಿಕೆ ಸಹಜವಾಗಿಯೇ ಇತ್ತು. ಐ ಯಾಮ್ ಇನ್ ಹೋಂ ಮಮ್ಮಿ ಎಂದು ಮೆಸೇಜ್ ಹಾಕಿದ್ಲು. ಆದ್ರೆ ಅದೇ ಕೊನೆ ಮೆಸೇಜ್ ಆಗಿತ್ತು. ಇನ್ನು ಪೊಲೀಸರಿಗಿದ್ದ ಅನುಮಾನ ಕೂಡ ಅಷ್ಟೆ .ಪ್ರಭುದ್ಯಾ ಎಡಕೈನಲ್ಲಿ ಒಂದು ಇಂಚು ಸೀಳಿದ ಗಾಯವಿದೆ. ತಾನಾಗೆ ಕುಯ್ದುಕೊಂಡರೆ ಅಷ್ಟು ಇಂಚು ಆಳಕ್ಕೆ ಇಳಿಯಲು ಸಾಧ್ಯವಿಲ್ಲ .
![Demo](https://ainlivenews.com/wp-content/uploads/2023/12/spoorthi-1.jpg)
Black radish: ಕಪ್ಪು ಮೂಲಂಗಿ ಬೆಳೆಯುವುದು ಹೇಗೆ..? ಇದರ ಉಪಯೋಗವೇನು..?
ಬಲವಾಗಿ ಕಡಿದರೆ ಮಾತ್ರ ಒಂದು ಇಂಚು ಆಳಕ್ಕೆ ಹೋಗಲು ಸಾಧ್ಯ. ಬಲಭಾಗದ ಕುತ್ತಿಗೆಯಲ್ಲಿ ಕೂಡ ಚಾಕುವಿನಿಂದ ಕುಯ್ಯಲಾಗಿದೆ. ವನ್ ಬಲಗೈನಿಂದ ಬಲಭಾಗದ ಕುತ್ತಿಗೆಯನ್ನ ಅಷ್ಟೊಂದು ಡೀಪ್ ಆಗಿ ಕೊಯ್ದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಮನೆಯ ಹಿಂಬದಿಯ ಬಾಗಿಲು ಓಪನ್ ಆಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಕಡೆ ಸಾವು ಸಂಭವಿಸಿದೆ. ಆಕೆಯ ತಮ್ಮ ಮನೆಯಿಂದ ಹೊರ ಹೋಗಿದ್ದ. ನಂತರ ತಾಯಿಗೆ ವಿಚಾರ ಮುಟ್ಟಿಸಿ ತಾನೇ ಬಂದು ಮನೆ ಬಾಗಿಲು ತೆಗೆದಿದ್ದ.
ಹಾಗು ಆಕೆಯ ಮೊಬೈಲ್ ಕೂಡ ಪತ್ತೆಯಾಗಿಲ್ಲ .. ಹೀಗಾಗಿ ಪೊಲೀಸರಿಗೂ ಕೂಡ ಇಂತಹ ಒಂದಷ್ಟು ಅಂಶಗಳು ಇದು ಹತ್ಯೆ ಎಂಬ ಶಂಕೆಗೆ ಕಾರಣವಾಗಿದೆ. ಆದರೆ ಮನೆಯ ಮುಂಭಾಗದಲ್ಲಿ ಹಾಗು ಅಕ್ಕ ಪಕ್ಕ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದಾಗ ಯಾರ ಚಲನವಲನ ಕೂಡ ಅನುಮಾನಾಸ್ಪದವಾಗಿ ಕಂಡು ಬಂದಿಲ್ಲ. ಆದರೆ ಇನ್ಬೂ ಕೂಡ ಸಿಕ್ಕಿರುವ ಡೆತ್ ನೋಟ್ ಮ್ಯಾಚ್ ಆಗ್ತಿಲ್ಲ ಎಂಬುದು ಪೊಲೀಸ್ ಮೂಲಗಳ ಮಾಹಿತಿ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಯಿಂದಲೇ ಈ ಸಾವಿನ ರಹಸ್ಯ ಹಿರ ಬರಲಿದೆ. ಹೀಗಾಗಿ ಪಿಎಂ ರಿಪೋರ್ಟ್ ಗಾಗಿ ಪೊಲೀಸರು ಕಾದು ಕೂತಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)