ಬೆಂಗಳೂರು: ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು. ನಾನು ಮುಡಾದಿಂದ ದಾಖಲೆ ತೆಗೆದುಕೊಂಡಿದ್ದೇನೆ ಎಂದು ಶ್ರೀರಾಮನ ಮೇಲೆ ಬಂದು ಪ್ರಮಾಣ ಮಾಡಲಿ ಎಂದು ಮೈಸೂರಿನ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಬೈರತಿ ಸುರೇಶ್ ಸವಾಲ್ ಹಾಕಿದ್ದಾರೆ.
ಮುಡಾಕ್ಕೆ ಸಂಬಂಧಪಟ್ಟ ಒಂದೇ ಒಂದು ದಾಖಲೆಯನ್ನೂ ನಾನು ತಗೆದುಕೊಂಡು ಹೋಗಿಲ್ಲ. ನಾನು ಈ ವಿಚಾರವಾಗಿ ಮೈಸೂರು ಶಾಸಕ ಶ್ರೀವತ್ಸ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಣೆ ಮಾಡಲು ಸವಾಲು ಹಾಕುತ್ತೇನೆ. ಚಾಮುಂಡಿ ಬೆಟ್ಟ, ಧರ್ಮಸ್ಥಳಕ್ಕೆ ಬಂದು ಅಣೆ ಮಾಡಲಿ ನಾನೂ ಮಾಡುತ್ತೇನೆ. ಶಾಸಕ ಶ್ರೀವತ್ಸ, ಶೋಭಾ ಕರಂದ್ಲಾಜೆ ಅವರು ಮೊದಲು ಸುಳ್ಳು ಹೇಳುವುನ್ನು ಬಿಡಲಿ ಎಂದು ಕಿಡಿ ಕಾರಿದರು.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ..? ಹಾಗಾದ್ರೆ ಈ ಕಾಯಿಲೆಗಳ ಸೂಚನೆ ಇರಬಹುದು.!
ಮೈಸೂರಿನ ಬಿಜೆಪಿ ಶಾಸಕರು ಬಾಯಿಬಿಟ್ಟರೆ ಸುಳ್ಳು ಹೇಳ್ತಾರೆ. ಶ್ರೀವತ್ಸ ಅವರು ಪೂಜೆ ಮುಗಿಸಿಕೊಂಡು, ಹಣೆಗೆ ನಾಮ ಹಾಕಿಕೊಂಡು ಬಂದು ಸುಳ್ಳು ಹೇಳ್ತಾರೆ. ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು, ಬಂದು ಅಣೆ ಮಾಡಲಿ ನಾನು ಮುಡಾ ದಾಖಲೆ ತಂದಿದ್ದೇನೆ ಅಂತ ಬಂದು ಆಣೆ ಮಾಡಲಿ ಎಂದು ಸವಾಲ್ ಹಾಕಿದರು.