ಬೆಂಗಳೂರು:- ನನ್ನ ರಾಜಕೀಯ ಭವಿಷ್ಯ ಹಾಳಾಯ್ತು ಎಂದು ಹೇಳಿ ಜಡ್ಜ್ ಮುಂದೆ ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ಮಾಜಿ ಸಚಿವ ರೇವಣ್ಣ.
ಮಹಿಳೆ ಕಿಡ್ನ್ಯಾಪ್ ಕೇಸ್: ಜಡ್ಜ್ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಆರೋಪಿ ಎಚ್.ಡಿ.ರೇವಣ್ಣ!
ಮಹಿಳೆ ಅಪಹರಣಕ್ಕೂ ನನಗೂ ಸಂಬಂಧವಿಲ್ಲ; ಈ ಸುಳ್ಳು ಕೇಸ್ನಿಂದ ನನ್ನ ರಾಜೀಕೀಯ ಭವಿಷ್ಯವೇ ಹಾಳು ಎಂದು ನ್ಯಾಯಾಧೀಶರ ಎದುರು ಹೇಳಿದ್ದಾರೆ. ಶನಿವಾರ ರಾತ್ರಿಯಿಡೀ ರೇವಣ್ಣ ಅವರ ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಭಾನುವಾರವೂ ವಿಚಾರಣೆ ಮುಂದುವರಿಸಿದರು. ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ರೇವಣ್ಣ ಮಾತ್ರ ಎಲ್ಲದಕ್ಕೂ ಒಂದು ಸಾಲಿನ ಉತ್ತರ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಮಹಿಳೆಯ ಅಪಹರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಯಾರನ್ನೂ ಅಪಹರಿಸಿಲ್ಲ. ನಮ್ಮ ಮನೆಯಲ್ಲಿ ನೂರಾರು ಮಹಿಳೆಯರು ಕೆಲಸ ಮಾಡುತ್ತಾರೆ. ಅಪಹರಣಗೊಂಡಿದ್ದಾರೆ ಎನ್ನಲಾದ ಮಹಿಳೆಯೇ ನನಗೆ ಪರಿಚಯವಿಲ್ಲ. ಆ ಮಹಿಳೆ ಆರೋಪಿಸಿರುವಂತೆ ರೇವಣ್ಣ ಎಂಬ ಹೆಸರಿನವರು ನೂರಾರು ಮಂದಿ ಇದ್ದಾರೆ. ರೇವಣ್ಣ ಎಂದು ಹೆಸರು ಇಟ್ಟುಕೊಂಡಿದ್ದೇನೆ ಎಂಬ ಮಾತ್ರಕ್ಕೆ ನನ್ನನ್ನು ಬಂಧಿಸಿರುವುದು ಸರಿಯಲ್ಲ,” ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ರೇವಣ್ಣ, ”ರಾಜಕೀಯ ದುರುದ್ದೇಶದಿಂದ ನನ್ನನ್ನು ಬಂಧಿಸಲಾಗಿದೆ. ಮಹಿಳೆಯ ಅಪಹರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ,” ಎಂದು ನ್ಯಾಯಾಧೀಶರ ಎದುರು ಬಿಕ್ಕಿಬಿಕ್ಕಿ ಅತ್ತರು ಎಂದು ಗೊತ್ತಾಗಿದೆ.
ಸುಳ್ಳು ಪ್ರಕರಣದಿಂದ ನನ್ನ ರಾಜಕೀಯ ಭವಿಷ್ಯವೇ ಹಾಳಾಗಿದೆ. ಯಾವುದೇ ತಪ್ಪು ಮಾಡದ ನನಗೆ ಕಾನೂನಿನ ರಕ್ಷಣೆ ನೀಡಬೇಕು,” ಎಂದು ನ್ಯಾಯಾಧೀಶರ ಎದುರು ಕಣ್ಣೀರಿಟ್ಟ ರೇವಣ್ಣ ಅವರಿಗೆ ಎಸ್ಐಟಿ ಅಧಿಕಾರಿಗಳು ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.
ಇದೊಂದು ರಾಜಕೀಯ ಷಡ್ಯಂತ್ರ. ಯಾವುದೇ ಪುರಾವೆ ಇಲ್ಲದೆ ಪೊಲೀಸರು ನನ್ನನ್ನು ಬಂಧಿಸಿದ್ದಾರೆ,” ಎಂದು ರೇವಣ್ಣ ಎಸ್ಐಟಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.