ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಸುಲ್ತಾನ್ ಆಡಳಿತ ನಡೆಸುತ್ತಿರುವುದು ಮುಸ್ಲಿಮರಿಗೆ ಹಲ್ಲೆ, ದೊಂಬಿ ನಡೆಸಲು ವಿಸಾ, ಪಾರ್ಸ್ಪೋರ್ಟ್ ಸಿಕ್ಕಂತಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
” ರಾಜ್ಯ ಭಯೋತ್ಪಾದಕರ ತಾಣವಾಗಿದೆ. ಶ್ರೀರಾಮನವಮಿ ದಿನದಂದೇ ಜೈಶ್ರೀರಾಮ್ ಎಂದು ಕೂಗಿದವರ ಕಾರು ತಡೆದು ಹಲ್ಲೆ ನಡೆಸಲಾಗಿದೆ. ರಾಮೇಶ್ವರ ಕೆಫೆ ಮೇಲಿನ ದಾಳಿ ಇವೆಲ್ಲವನ್ನು ಗಮನಿಸಿದರೆ ನಾವು ಭಾರತದಲ್ಲಿ ಇದ್ದೇವೋ ಅಥವಾ ಪಾಕಿಸ್ತಾನದಲ್ಲಿ ಇದ್ದೇವೋ ಎಂಬ ಆತಂಕ ಸೃಷ್ಟಿಯಾಗಿದೆ ಎಂದರು.
Health Care: ಚಪಾತಿ ಹಿಟ್ಟನ್ನು ಪ್ರಿಡ್ಜ್ʼನಲ್ಲಿಟ್ಟು ಬಳಕೆ ಮಾಡಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ.!
ಹಿಂದೂಗಳನ್ನು ಎರಡನೇ ದರ್ಜೆಯವರನ್ನಾಗಿ ನೋಡುತ್ತಿರುವ ರಾಜ್ಯ ಸರ್ಕಾರ ಮುಸ್ಲಿಂಮರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಮುಖಂಡರಿಗೆ ಮೆಣಸಿನ ಕಾಯಿತಿಂದಂತೆ ಆಗಿದೆ. ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಲು ಆಗದಂತ ಸ್ಥಿತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.