ಚಿತ್ರದುರ್ಗ: ಫೋಕ್ಸೋ ಕೇಸ್ ನಲ್ಲಿ ಬಂಧಿಯಾಗಿದ್ದ ಚಿತ್ರದುರ್ಗದ ಮುರುಘಾ ಶರಣರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಬಂಧಿಖಾನೆಯಿಂದ ಮುರುಘಾ ಶ್ರೀಗಳು ಬಿಡುಗಡೆ ಆಗಿದ್ದಾರೆ. ಜೈಲಿಂದ ಬಿಡುಗಡೆ ಆಗಿ ನಗುತ್ತಲೇ ಸ್ವಾಮೀಜಿ ಹೊರ ಬಂದರು,
ಈ ವೇಳೆ ಸ್ವಾಮೀಜಿ ಹೊರ ಬರುತ್ತಿದ್ದಂತೆ ಬಸವಪ್ರಭು ಸ್ವಾಮೀಜಿ ಹಾಗೂ ಮಠದ ಮರಿ ಸ್ವಾಮಿ ಬಸವಾಧಿತ್ಯ ಕಾಲಿಗೆ ನಮಸ್ಕರಿಸಿದರು ಇದೇ ಸಂಧರ್ಭದಲ್ಲಿ ಹಾರ ಹಾಕಿ, ಶ್ರೀಗಳ ಪರ ಜೈಕಾರ ಕೂಗಿದರು. ಇದೇ ವೇಳೆ ಮಾತನಾಡಿದ ಮುರುಘಾ ಶರಣರು, ಮುರುಗೇಶೇನ ದಯೆಯಿಂದ ಬಿಡುಗಡೆ ಆಗಿದ್ದು, ಕಾನೂನು ಹೋರಾಟದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.