ಹುಬ್ಬಳ್ಳಿ: ಕೇಂದ್ರ ಸರಕಾರವು ಮುದ್ರಾ ಯೋಜನೆಯಡಿ ಒದಗಿಸುವ ಸಾಲಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ ಎಂದು ವಿಧಾನ ಸಭೆ ವಿರೋಧ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ್ದು,ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರಕಾರದ
ಮೂರನೇ ಆವಧಿಯ ಪ್ರಥಮ ಆಯವ್ಯಯದಲ್ಲಿ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವುದು ಸ್ವ ಉದ್ಯೋಗಕ್ಕೆ ಸೂಕ್ತ ಆರ್ಥಿಕ ನೆರವು ಒದಗಿಸಲಿದೆ.
ಉತ್ಪಾದನಾ ವಲಯದಲ್ಲಿ ಕ್ರೆಡಿಟ್ ಗ್ಯಾರಂಟಿ ನೀಡುವ ಈ ಯೋಜನೆಯು ನಿರುದ್ಯೋಗ ನಿವಾರಣೆಗೆ ಪರಿಹಾರ ಒದಗಿಸಬಲ್ಲುದು.ಯುವ ಜನರಿಗೆ ಉದ್ಯೋಗ ಒದಗಿಸುವ ಸಲುವಾಗಿ ಐದು ಹೊಸ ಸ್ಕೀಂಗಳ ಅನುಷ್ಠಾನ.
ಕ್ಯಾನ್ಸರ್ ಕಾಯಿಲೆಯ ಮೂರು ಔಷಧೀಗಳ ಮೇಲಿನ ತೆರಿಗೆ ರದ್ದು.ನಗರಗಳ ಜಿಐಎಸ್ ಮ್ಯಾಪಿಂಗ್ ಮೂಲಕ ಸೈಟ್ ಗಳ ಗುರುತಿಸುವಿಕೆ.ದೇಶಿಯವಾಗಿ ಎಕ್ಸರೇ ಮಶೀನಗಳ ಉತ್ಪಾದನೆಗೆ ಪ್ರೋತ್ಸಾಹ.ಮೊಬೈಲ್ ಬಿಡಿ ಭಾಗಗಳ ತೆರಿಗೆ ಕಡಿತ.
ಮೊಬೈಲ್ ಮತ್ತು ಚಾರ್ಜರಗಳ ಬೆಲೆ ಇಳಿಕೆಗೆ ಕ್ರಮಮುಂದಿನ ಆರು ವರ್ಷದಲ್ಲಿ ಮೂರು ಪಟ್ಟು ಉತ್ಪಾದನೆಗೆ ಒತ್ತು.
Stop Eating Rice: ಅನ್ನ ಸೇವನೆ ಮಾಡುವುದು ಬಿಟ್ಟರೆ ದೇಹಕ್ಕೆ ಏನಾಗುತ್ತದೆ ಗೊತ್ತಾ..?
ಕಾರ್ಮಿಕರ ಅಭಿವೃದ್ಧಿಗೆ ಇ-ಪೋರ್ಟಲ್ ಅಭಿವೃದ್ಧಿ.ಪಿ.ಎಂ.ಆವಾಸ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ.ಭೂ ದಾಖಲೆಗಳ ಡಿಜಿಟಿಲೀಕರಣಕ್ಕೆ ಕ್ರಮ.ಆದಾಯ ತೆರಿಗೆ ಪಾವತಿ ಸರಳೀಕರಣ,ತೆರಿಗೆದಾರರ ಮೇಲಿನ ಭಾರ ಕಡಿಮೆ ಮಾಡಿರುವ ಸರಕಾರ, ನೌಕರರ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಲಾಗಿದೆ.
ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ಮೀಸಲು, 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ, ತರಕಾರಿ ಮಾರುಕಟ್ಟೆ ಆರಂಭ, ಕೃಷಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ.ಇನ್ನೂ ಆರ್ಥಿಕ ಸುಧಾರಣೆಗಳನ್ನು ಕೈಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ಮುಂಬರುವ ದಿನಗಳಲ್ಲಿ ಭಾರತ ಆರ್ಥಿಕವಾಗಿ ಮೂರನೇ ಸ್ಥಾನಕ್ಕೇರುವುದು ನಿಶ್ಚಿತ ಎಂದಿದ್ದಾರೆ.