ತುಮಕೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿದ್ದು, ತಮ್ಮ ತಮ್ಮ ಪಕ್ಷದ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಮಾಧುಸ್ವಾಮಿಯನ್ನ ಭೇಟಿಯಾಗಿದ್ದಾರೆ. ಹೌದು ಚಿಕ್ಕನಾಯಕನಹಳ್ಳಿಯ ಜೆಸಿಪುರದ ಮಾಧುಸ್ವಾಮಿ ನಿವಾಸದಲ್ಲಿ ಚಿಕ್ಕನಾಯಕನಹಳ್ಳಿಯ,
ಜೆಸಿಪುರದ ಮಾಧುಸ್ವಾಮಿ ನಿವಾಸದಲ್ಲಿ ಇಂದು ಮುಂಜಾನೆ ಮುದ್ದಹನುಮೇಗೌಡ ಭೇಟಿಯಾಗಿದ್ದಾರೆ. ಭೇಟಿ ವೇಳೆ ಮಾಧುಸ್ವಾಮಿಗೆ ಹೂಗುಚ್ಚ ನೀಡಿದರು. ಮಾಧುಸ್ವಾಮಿ-ಮುದ್ದಹನುಮೇಗೌಡ ಕೆಲಕಾಲ ಚರ್ಚೆ ನಡೆಸಿದರು. ಈವರೆಗೂ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರಕ್ಕೆ ಮಾಧುಸ್ವಾಮಿ ಆಗಮಿಸದ ಕಾರಣ ಮಾಧುಸ್ವಾಮಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.