ಬೆಂಗಳೂರು:- ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ ಹಿನ್ನೆಲೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯದಿಂದಾಗಿ ತನ್ನ ಗಂಡ ಸಾವನ್ನಪ್ಪಿರುವುದಾಗಿ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಳಗ್ಗೆ ಎದ್ದಾಕ್ಷಣ ಯವಾಗಲೂ ಹೀಗೆ ಇರಿ: ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲಿರತ್ತೆ!
ನಗರದಲ್ಲಿ ವಾಸವಾಗಿರುವ ರೋಹಿಣಿ ಜಯನ್ ಎಂಬುವರು ನೀಡಿದ ದೂರಿನ ಮೇರೆಗೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 106 ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ಆಸ್ಪತ್ರೆಯ ಬ್ಲಾಕ್ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಧಗ-ಧಗನೇ ಉತ್ತಿ ಉರಿದಿತ್ತು. ಆಸ್ಪತ್ರೆಯ ಪರಿಕರಗಳು ಸಂಪೂರ್ಣ ಹಾನಿಯಾಗಿ ರೋಗಿಗಳನ್ನ ಕೂಡಲೇ ಸ್ಥಳಾಂತರಿಸಲಾಗಿತ್ತು. ಮಾಹಿತಿ ತಿಳಿದು ಅಗ್ನಿಶಾಮಕ ವಾಹನ ಸಿಬ್ಬಂದಿಯು ಸ್ಥಳಕ್ಕೆ ಬಂದು ಅಗ್ನಿಯನ್ನ ನಂದಿಸಿದ್ದರು.
ಆದರೆ ನಿನ್ನೆ ನಡೆದ ತೀವ್ರ ನಿರ್ಲಕ್ಷ್ಯದಿಂದ ನಡೆದ ಅಗ್ನಿ ಅವಘಡದಿಂದಾಗಿ ಗುಣಮುಖರಾಗುತ್ತಿದ್ದ ತನ್ನ ಗಂಡ ಫಣೀಕರ್ ಸುಜಯ್ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ದಿವ್ಯನಿರ್ಲಕ್ಷ್ಯದಿಂದಾಗಿ ತನ್ನ ಗಂಡ ಮೃತರಾಗಿದ್ದು, ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಮಹಿಳೆ ತಿಳಿಸಿದ್ಧಾರೆ.
ನ್ಯೂಮೋನಿಯಾ ಹಾಗೂ ಎಚ್.1 ಎನ್.1 ಚಿಕಿತ್ಸೆಗಾಗಿ ಸೆ.1ರಂದು ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗುತ್ತಿದ್ದಂತೆ ಹೃದ್ರೋಗ ತಪಾಸಣಾ ಘಟಕ (ಸಿಸಿಯು)ದಲ್ಲಿ ಶಿಫ್ಟ್ ಮಾಡಲಾಗಿತ್ತು. ಇದೇ ಘಟಕದಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದಾಗ ಆಸ್ಪತ್ರೆಯು ಆಡಳಿತ ಮಂಡಳಿ ಪ್ರತಿಕ್ರಿಯಿಸಿರಲಿಲ್ಲ. ಈ ಬಗ್ಗೆ ಒತ್ತಾಯಿಸಿದಾಗ ನಿನ್ನೆ ಸಂಜೆ 4.30ಕ್ಕೆ ಸಿಸಿಯು ಘಟಕಕ್ಕೆ ಒಳಬಿಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಪತಿಯನ್ನ ನೋಡಿದಾಗ ಮೃತರಾಗಿರುವುದು ಕಂಡುಬಂದಿದೆ. ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ತನ್ನ ಪತಿ ಸಾವನ್ನಪ್ಪಿರುವುದಾಗಿ ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾರೆ.