ಕಲಬುರಗಿ :- ಕರದಾಳ ಶಕ್ತಿ ಪೀಠದ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿಯವರನ್ನು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಕಲಬುರಗಿ ಪ್ರವಾಸದಲ್ಲಿರುವ ಶ್ರೀಗಳನ್ನ ಭೇಟಿ ಮಾಡಿ ಭಾರತೀಯ ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಕಾಪಾಡಲು ಪೂಜ್ಯ ಶ್ರೀಗಳ ಆಶೀರ್ವಾದ ಜನಪ್ರತಿನಿಧಿಗಳ ಮೇಲಿರಬೇಕು ಎಂದು ಹೇಳಿದ ಜಾಧವ್ ನಿಮ್ಮ ದಯೆಯಿಂದ ನಮ್ಮ ಮೇಲಿರಲಿ ಅಂದ್ರು. ಇದೇವೇಳೆ ಮಾತಾಡಿದ ಪೂಜ್ಯಶ್ರೀಗಳು ಬರುವ ದಿನಮಾನಗಳಲ್ಲಿ ನಿಮಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಆಶೀರ್ವಾದಿಸಿದರು.