ಕೆ.ಆರ್.ಪುರ, ಏ.13- ಈ ಬಾರಿ ಲೋಕಸಭಾ ಚುನಾವಣೆಯಗೆ ವಯಸ್ಸಾದ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಮಹದೇವಪುರದ, ಮಂಡೂರಿನ ಶತಾಯುಷಿ ಗೌಡರ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಮತದಾನ ಮಾಡಿದ್ದಾರೆ.
ಕಮಲಮ್ಮ ಶತಾಯುಷಿ ಆದ ಕಾರಣ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಭದ್ರತೆಯೊಂದಿಗೆ
ಮನೆಗೆ ತೆರಳಿ ಮತಗಟ್ಟೆಯನ್ನ ನಿರ್ಮಿಸಿ ಮತದಾನ ಪಡೆದರು.ಶತಾಯುಷಿ ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು.
ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ, ನೀವಿನ್ನೂ ಮೋದಿ ಭ್ರಮೆಯಲ್ಲಿದ್ಸೀರಾ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ
ಶತಾಯುಷಿ ಪಟೇಲರ ಕಮ್ಮಲಮ್ಮ ಅವರ ಪುತ್ರ ಶ್ರೀನಿವಾಸ್ ಗೌಡ ಮಾತನಾಡಿ, ನಮ್ಮ ತಾಯಿ ಬ್ರಿಟಿಷ್ ಸರ್ಕಾರದ ಆಡಳಿತವನ್ನು ನೋಡಿದ್ದಾರೆ, ರಾಜ ಮಹಾರಾಜರ ಆಡಳಿತವನ್ನ ನೋಡಿದ್ದಾರೆ,
ಭಾರತ ದೇಶದಲ್ಲಿ ಮತದಾನ ಪ್ರಾರಂಭಗೊಂಡಾಗಿನಿಂದಲು ನಮ್ಮ ತಾಯಿ ಮತದಾನದ ಹಕ್ಕನ್ನು ಚಲಾಯಿಸುತ್ತಾ ಬಂದಿದ್ದಾರೆ.
80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಸರ್ಕಾರಕ್ಕೆ ಕೃತಜ್ಞತೆಯನ್ನ ತಿಳಿಸಿದರು.
ಇಂತಹ ಶತಾಯುಷಿ ಮತದಾರರು ನಮ್ಮ ಗ್ರಾಮದ ಹೆಮ್ಮೆ. ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಚುನಾವಣಾಧಿಕಾರಿ ನಟರಾಜ್, ಕಮಲಮ್ಮ ಅವರ ಮಕ್ಕಳಾದ ಬಸವೇಗೌಡ, ವೆಂಕಟೇಗೌಡ, ಸೊಸೆ ಇಂದಿರಾ, ಮೊಮ್ಮಗ ತೇಜಸ್ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.