ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಅವನಿಗೆ ಸಂಸ್ಕೃತಿ ಇಲ್ಲವೆಂದು ಏಕವಚನದಲ್ಲೇ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚನೆಂದ ಹೇಳಿದ ಅವರು, ಅನಂತಕುಮಾರ್ ಹೆಗಡೆ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತಕುಮಾರ್ ಹೆಗಡೆ 4 ವರ್ಷ ಕುಳಿತುಕೊಂಡು ಜನರ ವಿಶ್ವಾಸಕ್ಕೆ ಮೋಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿ ಅವನಿಗೆ ಟಿಕೆಟ್ ಕೊಡಲಿ, ಜನ ಬದಲಾವಣೆ ಮಾಡ್ತಾರೆ ಚುನಾವಣೆಯಲ್ಲಿ ನಾನು ಕೂಡಾ ಸೋತಿದ್ದೇನೆ ಆದ್ರೆ ಮಾನ ಮರ್ಯಾದೆ ಬಿಟ್ಟು ಈ ರೀತಿ ಮಾಡುವುದಿಲ್ಲ ಆತ ತಲೆಕೆಟ್ಟಿರುವ ವ್ಯಕ್ತಿ, ಮಾನ ಮರ್ಯಾದೆ ಇಲ್ಲದಿರುವ ವ್ಯಕ್ತಿ
ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವರಿಗೆ ಧಿಕ್ಕಾರ ಹಾಕಬೇಕು ಎಂದು ಸಂಸದ ಹೆಗಡೆ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು