ನವದೆಹಲಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಅಜಿತ್ ಪವಾರ್ ಅವರ ಎನ್ಸಿಪಿ ಬಣಕ್ಕೆ ಆಘಾತ ಎದುರಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಶೋಚನೀಯ ಪ್ರದರ್ಶನದ ಬಳಿಕ ಪಿಂಪ್ರಿ ಚಿಂಚ್ವಾಡದ ನಾಲ್ವರು ಹಿರಿಯ ನಾಯಕರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಅವರೆಲ್ಲರೂ ತಮ್ಮ ಮಾಜಿ ನಾಯಕ ಶರದ್ ಪವಾರ್ ಅವರ ನೇತೃತ್ವದ ಪಕ್ಷವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಅಜಿತ್ ಪವಾರ್ ಬಣದ ಜೊತೆ ಗುರುತಿಸಿಕೊಂಡಿದ್ದ ಪಿಂಪ್ರಿ-ಚಿಂಚ್ವಾಡ ಘಟಕದ ಅಜಿತ್ ಗವಹಾನೆ, ವಿದ್ಯಾರ್ಥಿ ಘಟಕದ ಮುಖ್ಯಸ್ಥ ಯಶ್ ಸಾನೆ, ಮಾಜಿ ಕಾರ್ಪೋರೇಟರ್ಗಳಾದ ರಾಹುಲ್ ಭೋಸ್ಲೆ ಮತ್ತು ಪಂಕಜ್ ಭಾಲ್ಕೇರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈಗಗಾಲೇ ಅಜಿತ್ ಪವಾರ್ಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿ ಪ್ರಕಾರ, ರಾಜೀನಾಮೆ ನೀಡಿರುವ ಅಜಿತ್ ಗವಹಾನೆ ಭೋಸರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
Cucumber Water: ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಈ ಕ್ಷೇತ್ರದಿಂದ ಕಳೆದ ಎರಡು ಬಾರಿ ಬಿಜೆಪಿ ಮಹೇಶ್ ಲಾಂಡ್ಗೆ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಜೊತೆಯಾಗಿಯೇ ಹೋಗಲಿದ್ದಾರೆ. ಕ್ಷೇತ್ರ ಹಂಚಿಕೆ ವೇಳೆ ಭೋಸರಿ ಕ್ಷೇತ್ರ ಬಿಜೆಪಿಗೆ ಹೋಗಲಿದೆ ಎಂಬವುದು ಬಹುತೇಕ ಖಾತ್ರಿಯಾದ ಹಿನ್ನೆಲೆ ಅಜಿತ್ ಗವಹಾನೆ ರಾಜೀನಾಮೆ ನೀಡಿದ್ದಾರೆ. ಪಿಂಪ್ರಿ-ಚಿಂಚ್ವಾಡ ಭಾಗದಲ್ಲಿ ಎನ್ಸಿಪಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ.