ಅದೆಷ್ಟೋ ಯುವಕ ಯುವತಿಯರು ಹತ್ತನೇ ತರಗತಿ ಫೇಲಾದರೆ ಸಾಕು. ಪುನಃ ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸಾಗುವ ಹಂಬಲ ಅವರಲ್ಲಿ ಕುಗ್ಗಿ ಹೋಗಿರುತ್ತೆ. ಇಂತಹ ಸಂದರ್ಭದಲ್ಲಿ ಕಲಿಕೆಗೆ ವಯಸ್ಸಿಲ್ಲ ಎಂಬುದನ್ನು ಸಾಬೀತು ಪಡಿಸಲು ಸಜ್ಜಾಗಿರುವ ಮಹಿಳೆ ಪ್ರಸಕ್ತ ಸಾಲಿನ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯನ್ನ ಮಗನ ಜೊತೆ ಬರೆಯಲು ಸಜ್ಜಾಗಿರುವುದು ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ಅಷ್ಟಕ್ಕೂ ಆ ತಾಯಿ ಮಗ ಯಾವ ಊರಿನವರು ಅಂತೀರಾ ಈ ಸ್ಟೋರಿ ನೋಡಿ..
ಹೌದು ಕಲಿಕೆಗೆ ಅಡ್ಡಿಯಾದ ಬಡತನ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಾಲತೇಶ ಸೋಮಪ್ಪ ಹೊನ್ನತ್ತಿ ಈತ ಈಗ ಸದ್ಯ ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜಾಗಿದ್ದಾನೆ. ಈತನ ತಾಯಿ ಪುಷ್ಪಾವತಿ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ 1999 ನೇ ಇಸ್ವಿಯಲ್ಲಿ ಪಾಸಾಗಿದ್ದಳು. ಆದರೆ ಮನೆಯಲ್ಲಿ ಬಡತನ ಇದ್ದಕಾರಣ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸಲಿಲ್ಲ. 2007 ರಲ್ಲಿ ಚೌಡಯ್ಯದಾನಪುರ ಗ್ರಾಮದ ಸೋಮಪ್ಪ ಮಾರ್ತಂಡಪ್ಪ ಹೊನ್ನತ್ತಿ ಎಂಬುವವರ ಜೊತೆಗೆ ವಿವಾಹವಾಗುತ್ತದೆ.
ಗ್ರಾಮಪಂಚಾಯಿತಯಲ್ಲಿ ನೀರಗಂಟಿಯಾಗಿ ಸೇವೆ ಸಲ್ಲಿಸುತ್ತಿರುವ ಪುಷ್ಪಾವತಿ ಆರ್ಥಿಕ ಪರಸ್ಥಿತಿಯಲ್ಲಿ ಕಡು ಬಡತನದಲ್ಲಿ ಬದುಕುತ್ತಿರುವ ಕುಟುಂಬ. ಈ ಬಡತನ ಮಧ್ಯದಲ್ಲಿಯೇ ಗಂಡ ಗ್ರಾಪಂ ಚಿಕ್ಕಕುರುವತ್ತಿ ವ್ಯಾಪ್ತಿಯ ವಾಟರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ, ಬೀದಿ ದೀಪಗಳನ್ನು ಸರಿಪಡಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬದ ಮೇಲಿಂದ ಬಿದ್ದು ಅನಾರೋಗ್ಯದಿಂದ ಬಳಲಿ 2019 ರಲ್ಲಿ ಸಾವನ್ನಪ್ಪುತ್ತಾನೆ. ಆದರೆ ಪರಸ್ಥಿತಿಯನ್ನು ಕಂಡು ಗ್ರಾಮಸ್ಥರು ಹಾಗೂ ಪಂಚಾಯಿತಿಯವರು ಅನುಕಂಪದ ಮೇಲೆ ಪುಷ್ಪಾವತಿಗೆ ಕೆಲಸವನ್ನು ಕೊಡಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಪುಷ್ಪಾವತಿ ನೀರಗಂಟಿಯಾಗಿ ಸೇವೆಸಲ್ಲಿಸುತ್ತಿರುವುದು ಇನ್ನೊಂದಡೆ ಹೆಮ್ಮೆಯ ಸಂಗತಿಯಾಗಿದೆ.
ಕಲಿಕೆಗೆ ಪ್ರೇರಣೆಯಾಯ್ತು ಪ್ರಧಾನಿ ಮೋದಿಜಿ ಆಹ್ವಾನ: 2023 ರ ಅಗಷ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದೀಜಿಯವರಿದಿಂದ ವಿಶೇಷ ಆಹ್ವಾನಿತಳಾಗಿ ಸ್ವಾತಂತ್ರೊತ್ಸವ ಕಾರ್ಯಕ್ರಮದಲ್ಲಿ ಪುಷ್ಪಾವತಿ ಭಾಗಿಯಾಗಿದ್ದಳು. ಅಂದಿನಿದಲೇ ತಾನು ಇನ್ನೂ ಕಲಿಯಬೇಕು ಹತ್ತನೇ ತರಗತಿಯನ್ನು ಪಾಸಾಗಬೇಕು, ನಿರಂತರವಾಗಿ ಕಲಿಕೆಯಲ್ಲಿ ತೊಡಗಬೇಕು ಎಂಬ ಮನದಾಸೆಯಂತೆ ಕಲಿಕೆಯ ಉತ್ಸಾಹ, ಉತ್ಸಾಹದ ಜೊತೆಗೆ ಜೀವನದಲ್ಲಿ ಸಾಧನೆಯ ಮೂಲಕ ಯಶಸ್ಸನ್ನು ಗಳಿಸಬೇಕು ಎಂಬ ತುಡಿತದಿಂದ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಪುಷ್ಪಾವತಿ ಇದೀಗ ಕಾತುರದಿಂದ ಕಾಯುತ್ತಿದ್ದಾಳೆ.