ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಬಗ್ಗೆ ಅವರ ಸ್ನೇಹಿತ ಉಮೇಶ್ ಕುಮಾರ್ ಎಂಬ ವ್ಯಕ್ತಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಜೀವನದ ಕಠಿಣ ದಿನಗಳಲ್ಲಿ ಮೊಹಮ್ಮದ್ ಶಮಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಮುಂದಾಗಿದ್ದರು ಎಂದರು.
ಮೂರೂ ಸ್ವರೂಪದಲ್ಲಿ ಮೊಹಮ್ಮದ್ ಶಮಿ ಕೀ ವೇಗಿಯಾಗಿದ್ದಾರೆ. ಅದರಲ್ಲಿಯೂ ಒಡಿಐ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಶಮಿ ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ, ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯ ಗೆಲುವಿನಲ್ಲಿ ಶಮಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಅಷ್ಟೇ ಅಲ್ಲದೆ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಬೌಲರ್ ಆಗಿದ್ದರು.
ಈ ಇಬ್ಬರೂ ಸ್ಟಾರ್ ಆಟಗಾರರನ್ನು ಖರೀದಿಸಲು ಕೋಲ್ಕತಾ ನೈಟ್ ರೈಡರ್ಸ್ ಪ್ಲಾನ್ ?!
ಶುಭಾಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಉಮೇಶ್ ಕುಮಾರ್, “ಮೊಹಮ್ಮದ್ ಶಮಿ ತಮ್ಮ ವೃತ್ತಿ ಜೀವನದ ಕಠಿಣ ಅವಧಿಯಲ್ಲಿ ಸಾಕಷ್ಟು ಹೋರಾಟವನ್ನು ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ನನ್ನ ಜೊತೆ ನೆಲೆಸಿದ್ದರು. ಆದರೆ, ಪಾಕಿಸ್ತಾನ ಜೊತೆಗಿನ ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಅವರು ಮಾನಸಿಕ ಸಾಕಷ್ಟು ಕುಗ್ಗಿದ್ದರು. ಇದರಿಂದ ರಾತ್ರಿಯೀಡಿ ನಿದ್ರೆ ಮಾಡುತ್ತಿರಲಿಲ್ಲ. ಟೀಕೆಗಳು ಹಾಗೂ ಟ್ರೋಲ್ಗಳನ್ನು ಸಹಿಸಬಲ್ಲೆ ಆದರೆ, ದೇಶದ ವಿರುದ್ಧದ ಆರೋಪವನ್ನು ಸಹಿಸಲು ಸಾಧ್ಯವಿಲ್ಲ ಎಂದು ನನ್ನ ಬಳಿಕ ಹೇಳಿಕೊಂಡಿದ್ದರು,”
ಈ ಆರೋಪದ ಸುದ್ದಿ ಬಂದ ಬಳಿಕ ಮೊಹಮ್ಮದ್ ಶಮಿ ಅವರು ಅಂದಿನ ರಾತ್ರಿ ಏನಾದರೂ (ಆತ್ಮಹತ್ಯೆ) ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದರು. ಅಂದು ಮುಂಜಾನೆ 4 ಗಂಟೆ, ನಾನು ನೀರು ಕುಡಿಯಲು ಎಚ್ಚರಗೊಂಡಿದ್ದೆ. ಅಡುಗೆ ಮನೆಗೆ ನೀರು ಕುಡಿಯಲು ಹೋಗುತ್ತಿದ್ದ ವೇಳೆ ಬಾಲ್ಕನಿಯಲ್ಲಿ ಶಮಿ ನಿಂತುಕೊಂಡಿರುವುದನ್ನು ನೋಡಿದೆ. ನಾವು 19ನೇ ಮಹಡಿಯಲ್ಲಿ ನೆಲೆಸಿದ್ದೆವು. ಅಂದು ಏನು ನಡೆದಿತ್ತು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಶಮಿ ವೃತ್ತಿ ಜೀವನದ ಬಗ್ಗೆ ನಾನು ಅಂದು ದೀರ್ಘಾವಧಿ ಯೋಚಿಸಿದ್ದೆ. ಇದಾದ ಒಂದು ದಿನದ ಬಳಿಕ ನಾವು ಈ ಬಗ್ಗೆ ಮಾತನಾಡಿದೆವು. ನಂತರ ಶಮಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ ಎಂಬುದನ್ನು ಕಮಿಟಿ ವೇಗಿಗೆ ಸಂದೇಶವನ್ನು ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ವಿಶ್ವಕಪ್ ಗೆದ್ದಷ್ಟೇ ಖುಷಿಯನ್ನು ಅನುಭವಿಸಿದ್ದರು,” ಎಂದು ಉಮೇಶ್ ಕುಮಾರ್ ಬಹಿರಂಗಪಡಿಸಿದ್ದಾರೆ.