ಬೆಂಗಳೂರು: ಮೈಸೂರು ಸಮಾವೇಶದಲ್ಲಿ ನರೇಂದ್ರ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಮೌನ ಏಕೆ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಾರೆ.
ಆದರೆ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಎಚ್ ಡಿ ದೇವೇಗೌಡ ಕುಟುಂಬ, ಬಿಎಸ್ ಯಡಿಯೂರಪ್ಪ ಕುಟುಂಬ ಇತ್ತು. ಹೀಗಿದ್ದರೂ ಅವರು ಮೌನವಾಗಿದ್ದರು. ತಮಗೆ ಬೇಕಾದಾಗ ಕುಟುಂಬ ರಾಜಕಾರಣದ ಬೆಂಬಲ ಪಡೆಯುತ್ತಾರೆ, ಬೇಡದೆ ಇದ್ದಾಗ ತೆಗಳುತ್ತಾರೆ ಎಂದರು. ಮೋದಿ ರಾಜ್ಯ ಭೇಟಿ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ
ಬಿಜೆಪಿ ಎಂದು ಮೋದಿ ಎಲ್ಲೂ ಹೇಳಲಿಲ್ಲ. ಅವರ ಪ್ರಣಾಳಿಕೆಯಲ್ಲಿ ಮೋದಿಕಿ ಗ್ಯಾರಂಟಿ ಎಂದಿದ್ದಾರೆ. ಬಿಜೆಪಿ ಮೋದಿ ಪಕ್ಷ ಆಗಿದೆಯೇ ಹೊರತು, ಪಕ್ಷವಾಗಿಲ್ಲ. ವ್ಯಕ್ತಿ ಪೂಜೆಯ ಪರಾಕಾಷ್ಠೆಯಾಗಿದೆ. ಮಂದಿಯನ್ನು ಪ್ರಧಾನಿ ಮಾಡಲು ಓಟ್ ಹಾಕಿ ಎಂದು ಕೇಳುತ್ತಿದ್ದಾರೆ. ಇದರ ಪರಿಣಾಮವಾಗಿ ಮೋದಿ ಅವರು ಕೂಡಾ ಮೋದಿ ಬಗ್ಗೆನೇ ಮಾತನಾಡ್ತಾರೆ. ಇದು ಆತ್ಮರತಿಯ ಅತಿರೇಕದ ಭ್ರಮೆಯಾಗಿದೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)