ಗದಗ:- ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆ ಗದಗನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ನಗರದ ವೆಂಕಟೇಶ ಚಿತ್ರಮಂದಿರ ರಸ್ತೆಯ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.
ಪಾಕಿಸ್ತಾನ: ಮತ್ತೊಂದು ಪೋಲಿಯೊ ಪ್ರಕರಣ ದೃಢ, ಮಗು ಸಾವು
ಗದಗ-ಬೆಟಗೇರಿ ನಗರಸಭೆ ಸದಸ್ಯ ಪ್ರಕಾಶ ಅಂಗಡಿ ನೇತೃತ್ವದಲ್ಲಿ ಪೂಜೆ ಮಾಡಲಾಗಿದ್ದು, ಪರಸ್ಪರ ಸಿಹಿ ತಿನಿಸಿ ಕೇಂದ್ರ ಸರ್ಕಾರಕ್ಕೆ ಶುಭ ಹಾರೈಕೆ ಮಾಡಿದ್ದಾರೆ. ಮೋದಿ ನೇತೃತ್ವದ ಕೆಂದ್ರ ಸರ್ಕಾರ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯ ಮಾಡಲಿ. ಐದು ವರ್ಷ ನಿರಾತಂಕವಾಗಿ ಅಧಿಕಾರ ನಡೆಸಲಿ. ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮತ್ತಷ್ಟು ಸಧೃಢ, ಬಲಿಷ್ಠ ರಾಷ್ಟ್ರ ಮಾಡಲಿ ಎಂದು ಹಾರೈಕೆ ಮಾಡಿದ್ದಾರೆ. ನಗರಸಭೆ ಸದಸ್ಯ ಅನಿಲ್ ಅಬ್ಬಿಗೇರಿ, ರಾಹುಲ್ ಅರಳಿ, ಮಲ್ಲು ಕೋಟಿನ್, ಸುರೇಶ ಪಾಪನಾಳ, ಪಾಪು ಯಳಮಲಿ, ಶಿವಣ್ಣ ಕೊಣ್ಣೂರ, ಶಿವರಾಜ ಪಾಟೀಲ್, ಅಶೋಕ ಬಂಕಾಪೂರ, ಮಲ್ಲಿಕಾರ್ಜುನ ಕಳ್ಳಿಮಠ, ಪ್ರಭಾಕರ ಉಡುಪಿ, ಬಸಯ್ಯ ಬಣ್ಣದನೂರಮಠ, ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)