ಕೋಲಾರ: ನಮಗೆ ಅಭ್ಯರ್ಥಿಗಿಂತ ಮೋದಿ ಬಹಳ ಮುಖ್ಯ, ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ ರಾಷ್ಟ್ರದ ಚುನಾವಣೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಜಿ ಇ ರಾಮೇಗೌಡ ಹೇಳಿದರು. ಜಿಡಿಎಸ್ ಪಕ್ಷದ ವತಿಯಿಂದ ಪಂಚಾಯತಿ ಮಟ್ಟದಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿಗಿಂತ ದೇಶ ದೊಡ್ಡದು ದೇಶ ಮುಖ್ಯ ದೇಶ ಅಂತ ಬಂದಾಗ ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಇಲ್ಲ, ಮೋದಿ ೧೦ ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಮತ ನೀಡುತ್ತಾರೆ.
ಇನ್ನು ಐದು ವರ್ಷ ಮೋದಿ ಪ್ರಧಾನಿಯಾದರೆ ನಮ್ಮ ದೇಶ ಪ್ರಪಂಚದಲ್ಲಿ ಮೊದಲನೆ ಸ್ಥಾನಕ್ಕೆ ಬರುತ್ತದೆ. ಆದ್ದರಿಂದ ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಕೆಲಸ ಮಾಡುತ್ತಿದ್ದೆವೆ, ಮೋದಿ ಪರವಾಗಿ ಕೆಲಸ ಮಾಡುತ್ತಿದ್ದೆವೆ. ಮಾಲೂರು ತಾಲೂಕಿಗೆ ರಾಹುಲ್ ಗಾಂಧಿ ಬಂದರು ನಮಗೆ ಏನು ಎಪೆಕ್ಟ್ ಆಗುವುದಿಲ್ಲ, ಇದು ದೇಶದ ಚುನಾವಣೆ ರಾಹುಲ್ ಗಾಂಧಿ ಬಂದಷ್ಟು ನಮಗೆ ಅನುಕೂಲ ೆಂದು ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)