ನವದೆಹಲಿ:– 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
IPL ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಮೊತ್ತ ಎಷ್ಟು..!?, ಲೀಗ್ ನಿಂದ ಹೊರಬಿದ್ದ RCBಗೆ ಸಿಕ್ಕಿದೆಷ್ಟು!?
ಈ ಸಂಬಂಧ ಮಾತನಾಡಿದ ಅವರು, ವಿಕಸಿತ ಭಾರತದ ನಿರ್ಮಾಣವಾಗುವವರೆಗೆ ಅಂದರೆ, 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ” ಎಂದು ಹೇಳಿದ್ದಾರೆ. ಆ ಮೂಲಕ 2047ರವರೆಗೆ ನಾನೇ ಪ್ರಧಾನಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ದೇವರು ನನಗೆ ವಿಶೇಷ ಕಾರಣಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ ಎಂಬುದು ನನ್ನ ಭಾವನೆ. ವಿಕಸಿತ ಭಾರತದ ಕಲ್ಪನೆ ಸಾಕಾರ ಮಾಡು ಎಂಬುದು ದೇವರ ಆದೇಶವಾಗಿದೆ. ದೇವರೇ ನನಗೆ ದಾರಿ ತೋರುತ್ತಿದ್ದಾನೆ, ಆತನೇ ನನಗೆ ಶಕ್ತಿ ತುಂಬುತ್ತಿದ್ದಾನೆ. ನನಗೆ ತುಂಬ ವಿಶ್ವಾಸವಿದೆ. ನಾನು 2047ರ ವೇಳೆಗೆ ದೇಶವು ವಿಕಸಿತ ಆಗುತ್ತದೆ ಎಂಬ ದೃಢ ನಿಶ್ಚಯವಿದೆ. ಹಾಗಾಗಿ, ನಾನು 2047ರವರೆಗೆ ಹಗಲು-ರಾತ್ರಿ ಕೆಲಸ ಮಾಡುತ್ತೇನೆ. ಅಲ್ಲಿಯ ತನಕ ದೇವರು ನನ್ನನ್ನು ಕರೆದುಕೊಳ್ಳುವುದಿಲ್ಲ” ಎಂದು 74 ವರ್ಷದ ನರೇಂದ್ರ ಮೋದಿ ಅವರು
ಸಂದರ್ಶನದ ವೇಳೆ ಪ್ರಸ್ತಾಪಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಉಗ್ರರು ಬಲಿಯಾಗುತ್ತಿರುವುದರ ಹಿಂದೆ ಭಾರತದ ಕೈವಾಡ ಇದೆ ಎಂಬುದಾಗಿ ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ಪಾಕಿಸ್ತಾನದವರು ಇದರ ಕುರಿತು ಚಿಂತೆ ಮಾಡುತ್ತಾರೆ. ಆದರೆ, ಪಾಕಿಸ್ತಾನದಲ್ಲಿ ಉಗ್ರರು ಹತ್ಯೆಗೀಡಾದರೆ, ಭಾರತದಲ್ಲಿರುವ ಕೆಲವರ ಕಣ್ಣಿನಲ್ಲಿ ನೀರು ಏಕೆ ಬರುತ್ತದೆ ಎಂಬುದೇ ನನಗೆ ಗೊತ್ತಾಗುತ್ತಿಲ್ಲ” ಎಂದಷ್ಟೇ ಹೇಳಿದರು. ಸಂದರ್ಶನದ ವೇಳೆ ರಾಹುಲ್ ಗಾಂಧಿ, ಪ್ರತಿಪಕ್ಷಗಳು, ಅಭಿವೃದ್ಧಿ, ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ ಸೇರಿ ಹಲವು ವಿಷಯಗಳ ಕುರಿತು ಮೋದಿ ಮಾತನಾಡಿದರು
![](https://ainlivenews.com/wp-content/uploads/2024/01/Ad-Banner-copy-scaled.jpg)