ಹೊಸಪೇಟೆ : ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಹತಾಷರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರ ದ ವ್ಯಾಪ್ತಿಯ ಕೂಡ್ಲಿಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ,
ಬಿಜೆಪಿಯವರು ಸರ್ವೇ ಪ್ರಕಾರ 200 – 220 ಗೆಲ್ಲಲಿದ್ದಾರೆ. ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇನಲ್ಲಿ 210 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಪ್ರಕಟಿಸಿದ್ದರು. ಇದನ್ನು ಮೋದಿ ಆನಂತರ ಡಿಲೇಟ್ ಮಾಡಿಸಿದ್ದಾರೆ. ಈ ವಿಷಯ ಜನರಿಗೆ ಗೊತ್ತಾದರೆ ವೋಟ್ ಹಾಕಲ್ಲ ಅಂತ ಹೀಗೆ ಮಾಡಿಸಿದ್ದಾರೆ ಎಂದು ಟೀಕಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!
ಮತದಾನ ಮಾಡುವ ಮುನ್ನ ಮೋದಿ ಏನು ಕೆಲಸ ಮಾಡಿದ್ದಾರೆ?, ಹತ್ತು ವರ್ಷ ಏನು ಕೆಲಸ ಮಾಡಿದ್ದಾರೆ ಅನ್ನುವುದು ಪರಿಶೀಲನೆ ಮಾಡಿ. ನುಡಿದಂತೆ ನಡೆದಿದ್ದೀರಾ? ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ?, ದೇಶ ರಕ್ಷಣೆ ಮಾಡೋದು ಮೋದಿ ಅಂತೇಳಿ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಅಂತ ಯಾವ ವಿಷಯಗಳಿಲ್ಲ ಎಂದು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)