ಬೆಂಗಳೂರು: ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಆ ರೀತಿ ಮಾತನಾಡಬಾರದು ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶಾಸಕರ ಮಗನ ರೌಡಿಸಂ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಆ ರೀತಿ ಮಾತನಾಡಬಾರದು.
ಅಂತಹವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಮಿನಿಸ್ಟರ್ ಆಗಲಿ, ಶಾಸಕ ಆಗಲಿ ಅಥವಾ ಶಾಸಕರ ಮಗನೇ ಆಗಲಿ ಯಾರೂ ಹಾಗೆ ಮಾತನಾಡಬಾರದು. ಈ ರೀತಿ ಮಾತನಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಹಾರ್ಟ್ ಅಟ್ಯಾಕ್ ತಡೆಯಲು ಈ ಬೀಜವೇ ಮದ್ದು: ನೀರಲ್ಲಿ ನೆನಸಿಟ್ಟು ತಿಂದ್ರೆ ಶುಗರ್-ಬಿಪಿ ಸಹ ಇರತ್ತೆ ಕಂಟ್ರೋಲ್!
ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ಮೊದಲೇ ಹೇಳಿದ ಹಾಗೆ ನನ್ನದು ಮುಚ್ಚುಮರೆ ವ್ಯಾಪಾರ ಇಲ್ಲ. ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಹಾಗೂ ಅಮಿತ್ ಶಾ ಅವರನ್ನ ಭೇಟಿ ಆಗುತ್ತಿದ್ದೇನೆ. ಇನ್ನು ಹೈಕಮಾಂಡ್ ನಾಯಕರಾದ ವೇಣುಗೋಪಾಲ್,
ಸುರ್ಜೇವಾಲಾರನ್ನ ಭೇಟಿ ಆಗುತ್ತೇನೆ. ಹೇಳಲು ಒಂದೆರಡಲ್ಲ ಬೇಕಾದಷ್ಟಿದೆ. ಪಕ್ಷ ಸಂಘಟನೆಗೆ ಸಮಾವೇಶಗಳ ಅಗತ್ಯ ಇದೆ. ಯಾವುದೇ ಸಮುದಾಯವೇ ಇರಲಿ, ಪಕ್ಷದ ಒಳಗೆ ಇರಲಿದೆ. ಗುಂಪುಗಾರಿಕೆ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಮಾತಾನಾಡುವುದಿಲ್ಲ ಎಂದರು.