ಮಂಡ್ಯ: ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಶಾಸಕ ರಮೇಶ್ ಬಾಬು ವ್ಯಂಗ್ಯದ ಹೇಳಿಕೆ ಹಿನ್ನಲೆ. ಶಾಸಕರ ವಿರುದ್ದ ಜೆಡಿಎಸ್ ನ ಮಾಜಿ ಸಚಿವ ಪುಟ್ಟರಾಜು ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹವನನ್ನು ನಾಯಕ ಮಾಡಲು ಹೋಗಿ ನಮ್ಮ ನಾಯಕನ ಆರೋಗ್ಯ ಹದಗೆಟ್ಟಿರೋದು… ಅಂಬರೀಶ್ ರವರನ್ನು ಸೋಲಿಸಲು ಈತ ನಮ್ಮ ನಾಯಕನನ್ನು ಹಳ್ಳಿ ಹಳ್ಳಿಗೆ ಹಗಲು ರಾತ್ರಿ ಎನ್ನದೆ ಕರೆದೊಯ್ದ. ಆ ಕಾರಣದಂದಲೇ ಅಂದೇ ಅವರ ಆರೋಗ್ಯ ಹದಗೆಡಿಸಿದ ಈ ಪುಣ್ಯಾತ್ಮ
ಈ ತರಹ ಕೀಳು ಮಟ್ಟದ ಹೇಳಿಕೆ ನೀಡುವ ಶಾಸಕನಿಗೆ ನಾಚಿಕೆ ಆಗಬೇಕು ಈ ತರಹ ಹೇಳಿಕೆಗಳು ಯಾವತ್ತಿಗೂ ಶಾಸಕ ಸ್ಥಾನಕ್ಕೆ ಗೌರವ ತರವಂತದ್ದಲ್ಲ ಮೊದಲು ಹೋಗಿ ನಮ್ಮ ಮಾತೃಶ್ರೀ ಸಮಾನ ರಾಗಿರೋ ಅವರ ತಾಯಿ ವಿಜಿಯಮ್ಮನವರ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಲಿ ಎಂದು ನಾಗಮಂಗಲದಲ್ಲಿ ಮಾಜಿ ಸಚಿವ ಪುಟ್ಟರಾಜು ಶಾಸಕನ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.