ಬಳ್ಳಾರಿ: ಅಕ್ಟೋಬರ್.16ರಂದು; ಬಳ್ಳಾರಿ ಗ್ರಾಮೀಣ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರು ಬಿಡುಗಡೆ ಹಿನ್ನಲೆ ಇಂದು ಶ್ರೀ ಕನಕ ದುರ್ಗಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ 1011 ತೆಂಗಿನ ಕಾಯಿ ಹೊಡೆಯುವ ಮೂಲಕ ಅಭಿಮಾನಿ ಎಂ.ಜಿ ಕನಕ ಪ್ರಾರ್ಥಿಸಿದರು. ಅಪ್ಪಟ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಅಭಿಮಾನಿಯಾದ ಎಂ.ಜಿ ಕನಕ ಅವರ ನೇತೃತ್ವದಲ್ಲಿ ಕನಕ ದುರ್ಗಮ್ಮ ದೇವಸ್ಥಾನದ ಮುಂಭಾಗದಲ್ಲಿ 1011 ತೆಂಗಿನಕಾಯಿ ಹೊಡೆದರು.
ನಂತರ ಮಾತನಾಡಿದ ಅವರು ಶಾಸಕ ಬಿ.ನಾಗೇಂದ್ರ ಅವರು ಬಿಡುಗಡೆ ಆಗಿರುವುದು ಬಹಳ ಸಂತೋಷದ ವಿಷಯ ಅವರು ಬಿಡುಗಡೆಯಾದ ಹಿನ್ನೆಲೆ ಇಂದು ಬಳ್ಳಾರಿ ನಗರದ ಆದಿ ದೇವತೆ ಶ್ರೀ ಕನಕ ದುರ್ಗಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ 1011 ತೆಂಗಿನಕಾಯಿ ಹೊಡೆಯುವ ಮೂಲಕ ಬಿ.ನಾಗೇಂದ್ರ ಅಣ್ಣನವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದರು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು: ಪ್ರತಿದಿನ ಎಳ್ಳನ್ನು ತಿನ್ನುವುದರಿಂದ ಸಿರುವ ಪ್ರಯೋಜನಗಳೇನು ಗೊತ್ತಾ..?
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ವಾಲ್ಮೀಕಿ ಪ್ರಕರಣದಲ್ಲಿ ಅವರ ಪಾತ್ರ ಇಲ್ಲದಿದ್ದರೂ ರಾಜಕೀಯ ಷಡ್ಯಂತರದಿಂದ ಅವರನ್ನು ಬಂಧಿಸಲಾಗಿತ್ತು ಆದರೆ ಅವರು ಜಾಮೀನಿನ ಮುಖಾಂತರ ಇಂದು ಬಿಡುಗಡೆಯಾಗಿದ್ದು ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ. ಅವರ ಬಿಡುಗಡೆ ಹಿನ್ನೆಲೆ ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತೆ ಎಂದರು.
ಬಿ.ನಾಗೇಂದ್ರ ಅಣ್ಣನವರು ಬಿಡುಗಡೆ ಆಗಿರುವ ಹಿನ್ನೆಲೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರ್ ಅವರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಸರ್ ಅವರು ಆದಷ್ಟು ಬೇಗ ಸಚಿವ ಬಿ.ನಾಗೇಂದ್ರ ಅಣ್ಣನವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಎಂ.ಜಿ ಕನಕ ವಿನಂತಿಸಿಕೊಂಡರು.
ಶಾಸಕ ಬಿ.ನಾಗೇಂದ್ರ ಅವರಿಗೂ ಮತ್ತು ಅವರ ಕುಟುಂಬದವರಿಗೂ ತಾಯಿ ಕನಕ ದುರ್ಗಮ್ಮ ದೇವಿ ಸುಖ, ಶಾಂತಿ, ನೆಮ್ಮದಿ, ಆಯುಷ್ ಆರೋಗ್ಯ ಮತ್ತು ರಾಜಕೀಯ ಜೀವನದಲ್ಲಿ ಉನ್ನತ ಯಶಸ್ಸನ್ನು ಕೊಟ್ಟು ಕಾಪಾಡಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿ.ನಾಗೇಂದ್ರ ಅವರ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಬಿ.ಮಾರುತಿ ಅಭಿಮಾನಿಗಳಾದ ಹಲಕುಂದಿ ಕೇಶವ, ರೂಪನಗುಡಿ ಉಮೇಶ್, ಅಸುಂಡಿ ಶಿವು, ಹರಗಿಣಿಡೊಣಿ ಗಾದಿ, ಚೇಳ್ಳಗುರ್ಕಿ ನಾಗರಾಜ್, ಎಂ.ಡಿ ನೂರ್, ಸುನೀಲ್, ವಾಲಿಭಾಷಾ, ವಿಕ್ರಂ, ಎರ್ರಿಸ್ವಾಮಿ, ರಾಮಲಿಂಗ ಸೇರಿದಂತೆ ಅವರ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.