ತುಮಕೂರು:- 2024 ರ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಧುಸ್ವಾಮಿ ಅವರಿಗೆ ಭಾರೀ ನಿರಾಸೆ ಆಗಿದ್ದು, ಟಿಕೆಟ್ ಮಿಸ್ ಬೆನ್ನಲ್ಲೇ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು.
ಜಿಲ್ಲೆ ತುರುವೇಕೆರೆ ಹೊರವಲಯದಲ್ಲಿರುವ ಮಾಜಿ ಶಾಸಕ ಮಸಾಲ ಜಯರಾಂ ತೋಟದ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾಧುಸ್ವಾಮಿ ಅವರನ್ನು ಬಿಎಸ್ವೈ ಸಮಾಧಾನಪಡಿಸಿದ್ದಾರೆ. ಇದರೊಂದಿಗೆ ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ತಡೆದಿದ್ದಾರೆ. ಆದ್ರೆ, ಮಾಧುಸ್ವಾಮಿ ಮುನಿಸು ಮಾತ್ರ ತಣ್ಣಗಾಗಿಲ್ಲ. ಹೌದು…ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಬೆಂಬಲ ಇಲ್ಲ ಎಂದಿದ್ದಾರೆ.
ಸಂಧಾನ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಧುಸ್ವಾಮಿ, ಯಡಿಯೂರಪ್ಪ ಹೇಳಿದ್ದಕ್ಕೆ ನಾನು ಚುನಾವಣೆಗೆ ರೆಡಿಯಾಗಿದ್ದೆ.ಬಿಎಸ್ವೈರನ್ನು ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಹೋಗಿದ್ದು. ಈಗ ಬಿ.ಎಸ್.ಯಡಿಯೂರಪ್ಪ ಪಕ್ಷ ಬಿಡೋದು ಬೇಡ ಎಂದಿದ್ದಾರೆ. ಒಂದು ಬರುತ್ತೆ ಹೋಗುತ್ತೆ ಎಂದಿದ್ದಾರೆ, ಅದಕ್ಕೆ ಸುಮ್ಮನಾಗುತ್ತೇನೆ. ಪಕ್ಷ ಬಿಡಲು ಪ್ಲಾನ್ ಮಾಡಿದ್ದೆ, ಈ ಬಗ್ಗೆ ಬಿಎಸ್ವೈಗೂ ಹೇಳಿದ್ದೆ. ಯಡಿಯೂರಪ್ಪ ಜತೆ ಪಕ್ಷದ ವಿಚಾರವಷ್ಟೇ ಚರ್ಚೆ ಆಗಿದೆ. ಸೋಮಣ್ಣಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ಆಗಿಲ್ಲ. ಈ ಬಗ್ಗೆ ಒತ್ತಡ ಹಾಕಬೇಡಿ ಎಂದು ಯಡಿಯೂರಪ್ಪಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಮಾಧುಸ್ವಾಮಿ ಅವರು ಸೋಮಣ್ಣಗೆ ಬೆಂಬಲ ಇಲ್ಲ ಎನ್ನುವ ಅರ್ಥದಲ್ಲಿ ಹೇಳಿದರು.
ಯಡಿಯೂರಪ್ಪ ಪಕ್ಷ ಬಿಡಬೇಡಿ ಅಂದಿದ್ದಾರೆ. ಆಯ್ತು ಅಂದಿದ್ದೇನೆ. ಸದ್ಯಕ್ಕೆ ಪಕ್ಷ ಬಿಡಲ್ಲ ಯಡಿಯೂರಪ್ಪಗೂ ನಮಗೂ ಪಕ್ಷದ ವಿಚಾರ ಅಷ್ಟೇ ಚರ್ಚೆ. ಸೋಮಣ್ಣರಿಗೆ ಬೆಂಬಲ ನೀಡೊದು ಚರ್ಚೆ ಆಗಿಲ್ಲ. ಈ ಚುನಾವಣೆ ಬಗ್ಗೆ ಒತ್ತಡ ಹಾಕಬೇಡಿ ಎಂದು ಯಡಿಯೂರಪ್ಪಗೆ ಹೇಳಿದ್ದೆನೆ. ನೋಡೊಣ ಬಿಡಿ ಇನ್ನೂ ಒಂದು ತಿಂಗಳ ಸಮಯ ಇದೆ ಎಂದಿದ್ದಾರೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.