ವಿಜಯಪುರ:- ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದ.
ಕರಾವಳಿಯಲ್ಲಿ ಮಳೆ ಆರ್ಭಟ… ಹೈ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನನ್ನು ಹೋರಿ ಎತ್ತಿ ಬಿಸಾಕಿದ ಪರಿಣಾಮ ಯುವಕನ ಕರುಳು ಆಚೆ ಬಂದಿರುವ ದಾರುಣ ಘಟನೆ ಜರುಗಿದೆ. ಇಂದು ನಡೆದ ಕರಿ ಹರಿಯುವ ವೇಳೆ ಸ್ಥಳದಲ್ಲೇ ನಿಂತಿದ್ದ ಯುವಕನನ್ನು ಹೋರಿಯೊಂದು ಕೊಂಬಿನಿಂದ ತಿವಿದು ಎಸೆದಿದೆ.
ಇದರ ಪರಿಣಾಮವಾಗಿ ಯುವಕನ ಕರುಳು ಆಚೆ ಬಂದಿದ್ದು, ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಯುವಕನಿಗೆ ಚಿಕಿತ್ಸೆ ಮುಂದುವರೆದಿದ್ದು ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
![](https://ainlivenews.com/wp-content/uploads/2024/01/Ad-Banner-copy-scaled.jpg)