ಬೆಂಗಳೂರು : ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಸಮಜಾಯಿಷಿ ಕೊಟ್ಟಿದ್ದಾರೆ.
ನಗರದಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದೆ ಬಿಜೆಪಿ ಇದರ ಬಗ್ಗೆ ಬಹಳ ಮಾತನಾಡಿದ್ದಾರೆ ನಾನು ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ ಎಷ್ಟು ಸುಳ್ಳು ಹೇಳಿದ್ದೀರಾ ಎಂದಿದ್ದೇನೆ ಅಷ್ಟೇ
BIGG News: ಮಂಡ್ಯದಿಂದ HDK ಕಣಕ್ಕೆ ಇಳಿಯೋದು ಫಿಕ್ಸ್: ಅಧಿಕೃತ ಘೋಷಣೆಯೊಂದೆ ಬಾಕಿ!
ನಮ್ಮ ರಾಜ್ಯದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಾ ನನ್ನ ಭಾಷಣದ ಒಂದೇ ತುಣುಕು ಹಾಕುತ್ತಿದ್ದೀರಾ ಮಾಧ್ಯಮಗಳು ಪೂರ್ತಿ ಭಾಷಣ ಹಾಕಿ 2014 ರ ಚುನಾವಣೆ ಭಾಷಣ ವೇಳೆ ಮೋದಿ ಉದ್ಯೋಗ ಭರವಸೆ ನೀಡಿದ್ರು ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿದ್ರು ಇದು ಸತ್ಯವಲ್ವಾ, ಉದ್ಯೋಗ ಕೊಟ್ಟಿದ್ದಾರ..? ನರೇಗಾ ಯೋಜನೆ ಅಡಿ 150 ದಿನ ಕೆಲಸ ಕೋಡಬೇಕು ಇಷ್ಟು ದಿವಸ ಕೆಲಸ ಕೇಂದ್ರ ಸರ್ಕಾರ ಕೊಟ್ಟಿದ್ದಾರ ಉತ್ತರ ಕರ್ನಾಟಕದಲ್ಲಿ ನೆರೆ ಬಂತು ಮೋದಿ ಬಂದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಹಿರಿಯನಾಗಿ ಯುವಕರಿಗೆ ಕಿವಿಮಾತು ಹೇಳಿದ್ದೇನೆ ಸಿ ಟಿ ರವಿ ನನ್ನ ಬಗ್ಗೆ ಹುಗರವಾಗಿಮಾತನಾಡಿದ್ದಾರೆ ಅಪ್ಪನಿಗೆ ಹುಟ್ಟಿದರ ಬಗ್ಗೆ ಮಾತನಾಡಿದ್ದಾರೆ ನೀವು ಯಾರಿಗೆ ಹುಟ್ಟಿದ್ದೀರಾ ಅಂತನಾನು ಕೇಳಲ್ಲ ನಮ್ಮ ತಾಯಿಯನ್ನು ಬಿಜೆಪಿ ಆಫೀಸ್ ಗೆ ಕರೆದುಕೊಂಡು ಬರುತ್ತೇನೆ ಅಲ್ಲೆ ಪ್ರಶ್ನೆ ಮಾಡಿ ಸಿಟಿ ರವಿ ಅಲ್ಲಾ ನೀನು, ಲೂಟಿ ರವಿ ನೀನು ನಿನ್ನ ಹಾಗೆ ಸಂಸ್ಕೃತಿ ಇಲ್ಲದೆ ನಾನು ಮಾತನಾಡಲ್ಲ ಎಂದು ಸಿ ಟಿ ರವಿ ವಿರುದ್ಧ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ನಾವು ಸತ್ಯ ಹೇಳಿದ್ರೆ ನಿಮಗೆ ಉರಿ ಬಿಳುತ್ತೆ ನೀವು ಉದ್ಯೋಗ ಕೊಟ್ಟಿ ಮಾಹಿತಿ ಕೊಡಿ ನೂರು ಸ್ಮಾರ್ಟ್ ಸಿಟಿಮಾಡಿದ್ರೆ ಹೆಸರು ಹೇಳಿ ನಾನುಮಾತನಾಡಿದ್ದು ತಪ್ಪಾಗಿದ್ರೆ ತಿದ್ದುಕೊಳ್ಳುತ್ತೇನೆ ಉದ್ಯೋಗ ಕೊಟ್ಟ ಬಗ್ಗೆ ಸಾಕ್ಷಿ ಕೊಡಿ ವಿರೋಧ ಪಕ್ಷದಲ್ಲಿದ್ದು ನಾನು ಮೋದಿಯನ್ನು ಹೊಗಳಲು ಆಗುತ್ತಾ..? ಜನರು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ ಸರಿಯಾಗಿ ಮಾತನಾಡುತ್ತಿದ್ದೀರಾ ಉದ್ಯೋಗ ಭರವಸೆ ಬಗ್ಗೆ ಮಾತನಾಡಿದ್ದು ಸರಿ ಇದೆ ಅಂದಿದ್ದಾರೆ ನಾವು ಉತ್ತರ ಕರ್ನಾಟಕ ಭಾಷೆಯಲ್ಲಿ ಕೆಲವೊಂದು ಭಾಷೆ ಬಳಸುತ್ತೇವೆ ಅದರಲ್ಲಿ ತಪ್ಪೇನಿದೆ
ನಾನು ಬಿಜೆಪಿಗರ ಕಪಾಳಕ್ಕೆ ಹೊಡಿ ಅಂದಿಲ್ಲ ಮೋದಿ ಅಂತ ಹೇಳಿದವರ ಕಪಾಳಕ್ಕೆ ಹೊಡಿಯಲು ಹೇಳಿದ್ದೇನೆ ಇದರಲ್ಲಿ ಯಾವುದೇ ತಪ್ಪಲ ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡ ತಂಗಡಗಿ