ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಸಚಿವ ಶಿವಾನಂದ ಪಾಟೀಲ್ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಲಯವನ್ನ ಉದ್ಘಾಟಿಸಿದರು. ಕಾರ್ಯಲಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀಜಿ ಅವರ ಪೋಟೊ ಇಲ್ಲದಿರುವುದನ್ನ ಗಮನಿಸಿದ ಸಚಿವರು ಗಾಂಧೀಜಿ ಹಾಗೂ
ಶಾಸ್ತ್ರೀಜಿ ಅವರ ಪೋಟೋ ಇಡುವಂತೆ ಇಒ ಪ್ರಕಾಶ ದೇಸಾಯಿ ಅವರಿಗೆ ಸೂಚನೆ ನೀಡಿದರು ನಂತರ ತಾಪಂ ಸಿಬ್ಬಂದಿಗಳು ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಪೋಟೊ ಇಟ್ಟರು. ಕಾರ್ಯಲಯ ಉದ್ಘಾಟನೆಗೂ ಮುನ್ನ ತಾಪಂ ಆವರಣದಲ್ಲಿ ಸಸಿ ನಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಮೈಬೂಬಸಾಬ ನಾಯ್ಕೋಡಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸುರೇಶ ಹಾರಿವಾಳ ಚಂದ್ರಶೇಖರಗೌಡ ಪಾಟೀಲ, ಶಂಕರಗೌಡ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು…