ಬೆಂಗಳೂರು:- CM ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣ ಸದ್ಯಕ್ಕೆ ಸೈಲೆಂಟಾಗಿದೆ.ಆದ್ರೆ ಕುಮಾರಸ್ವಾಮಿಯವರ ಮೇಲಿನ ಗಣಿ ಗುತ್ತಿಗೆ ಹಗರಣದ ಸದ್ದುಮಾತ್ರ ಕಡಿಮೆ ಯಾಗ್ತಿಲ್ಲ.ಯಾಕಂದ್ರೆ ಕಾಂಗ್ರೆಸ್ ಇದನ್ನ ಜಿದ್ದಿಗೆ ತೆಗೆದುಕೊಂಡಂತೆ ಕಾಣ್ತಿದೆ.ಯಾವುದೇ ಕಾರಣಕ್ಕೂ ಈ ಪ್ರಕರಣವನ್ನ ಬಿಡಬಾರ್ದು.ರಾಜ್ಯಪಾಲರ ಮೇಲೆ ಒತ್ತಡ ಕ್ರಿಯೇಟ್ ಮಾಡಿ ತನಿಖೆಗೆ ಕೊಡಿಸಲೇಬೆಕೆಂದು ಹಠಕ್ಕೆ ಬಿದ್ದಂತೆ ಕಾಣ್ತಿದೆ.ಯಾಕೆ ಏನು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ದರ್ಶನ್ ಅಂಡ್ ಗ್ಯಾಂಗ್ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರ: ದರ್ಶನ್ ಬಳ್ಳಾರಿ ಜೈಲಿಗೆ!
ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರಿಗೆ ಗಣಿ ಗುತ್ತಿಗೆಯ ಹಗರಣ ಉರುಳಾಗುವ ಸಾಧ್ಯತೆ ಗಳಿವೆ.ಪ್ರಾಸಿಕ್ಯೂಶನ್ ಗಾಗಿ ಕಳೆದ ೧೦ ತಿಂಗಳಿಂದ ರಾಜ್ಯಪಾಲರ ಮುಂದಿರುವ ಕಡತಕ್ಕೆ ಜೀವ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.ಇಷ್ಟು ದಿನಗಳ ಕಾಲ ವಿಳಂಬ ಧೋರಣೆ ಅನಿಸರಿಸ್ತಿರುವುದೇಕೆಂದು ರಾಜ್ಯಪಾಲರ ಮೇಲೆ ಒತ್ತಡಕ್ಕೆ ಮುಂದಾಗಿದೆ.ಮೂಡಾ ಪ್ರಕಣದಲ್ಲಿ ಏಕಾಏಕಿ ಒಂದೇ ದಿನದಲ್ಲಿ ಸಿದ್ರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡ್ತೀರ..ಆದ್ರೆ,ಲೋಕಾಯುಕ್ತರು ತನಿಖೆ ನಡೆಸಿ ಚಾರ್ಚ್ ಶೀಟ್ ನಲ್ಲಿ ತಪ್ಪಿದೆ ಅಂತ ಹೇಳಿದ್ರೂ ಪ್ರಾಸಿಕ್ಯೂಶನ್ ಗೆ ಕೊಡೋಕೆ ಹಿಂದು ಮುಂದು ನೋಡ್ತಿರೋದೇಕೆಂದು ತಿರುಗಿಬಿದ್ದಿದೆ.ಕಳೆದ ವಾರವಷ್ಟೇ ಸಚಿವ ಸಂಪುಟ ಸಭೆಯಲ್ಲಿ ಹೆಚ್ಡಿಕೆ ಸೇರಿದಂತೆ ನಾಲ್ವರು ಮೇಲಿರುವ ಕೇಸ್ ಬಗ್ಗೆ ಪ್ರಾಸಿಕ್ಯೂಷನ್ ಅವಕಾಶ ನೀಡುವ ಬಗ್ಗೆ ರಾಜ್ಯಪಾಲರಿಗೆ ಸಲಹೆ ನಿರ್ಣಯ ಅಂಗೀಕಾರ ಮಾಡಲಾಗಿತ್ತು. ಇದೀಗ ರಾಜಭವನ ಚಲೋ ಮೂಲಕ ಮತ್ತೊಮ್ಮೆ ರಾಜ್ಯಪಾಲರಿಗೆ ಒತ್ತಡ ಹಾಕಲು ಕೈ ನಾಯಕರು ಮುಂದಾಗಿದ್ದಾರೆ.
ಲೋಕಾಯುಕ್ತರು ಚಾರ್ಜ್ ಶೀಟ್ ಸಲ್ಲಿಸಿ ತನಿಖೆಗೆ ಕೇಳಿದ್ರೂ ರಾಜ್ಯಪಾಲರು ಕೊಟ್ಟಿಲ್ಲ.೧೦ ತಿಂಗಳಿಂದ ಫೈಲ್ ರಾಜಭವನದಲ್ಲೇ ಕೊಳೆಯುತ್ತಿದ್ರೂ ಗೌರ್ನರ್ ಅತ್ತ ತಲೆ ಹಾಕಿಲ್ಲ.ಹಾಗಾಗಿ ರಾಜ್ಯಪಾಲರ ಮೇಲೆ ಒತ್ತಡ ಏರಲು ಇದೇ ಆಗಸ್ಟ್ ೩೧ ರಂದು ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ.ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪಕ್ಷದ ಶಾಸಕರು,ಸಂಸದರು ಎಲ್ಲರೂ ಸೇರಿ ಧರಣಿ ನಡೆಸಲು ತೀರ್ಮಾನಿಸಿದೆ.ಬೃಹತ್ ಪ್ರತಿಭಟನೆಯ ನಂತರ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲು ಹೊರಟಿದೆ.ಈ ಮೂಲಕ ಪ್ರಾಸಿಕ್ಯೂಶನ್ ಗೆ ಕೊಡುವಂತೆ ಒತ್ತಡ ಏರಲಿದೆ..
ಒಟ್ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೂ ಗಣಿ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.ಹಳೆಯ ಕೇಸ್ ಗೆ ಮರುಜೀವ ಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.ರಾಜ್ಯಪಾಲರ ಮೇಲೆ ಒತ್ತಡ ಏರಲು ಹೋರಾಟದ ಹಾದಿ ಹಿಡಿದಿದೆ.ಇದಕ್ಕೆ ದಳಪತಿಗಳು ಹೇಗೆ ತಿರುಗೇಟು ನೀಡ್ತಾರೆ ಕಾದು ನೋಡ್ಬೇಕಿದೆ.